masthmagaa.com:
ಪ್ರಧಾನಿ ಮೋದಿ ಇವತ್ತು ಉತ್ತರ ಪ್ರದೇಶದ 36 ಮಂದಿ ಸಂಸದರ ಜೊತೆ ತಿಂಡಿ ಪೇ ಚರ್ಚಾ ಮಾಡಿದ್ದಾರೆ. ಇವತ್ತು ಬೆಳಗ್ಗೆ ಮೊದಲಿಗೆ 20, ನಂತರ 16 ಸಂಸದರು ಬಂದು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಎರಡೂ ಸಭೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸಂಸದ ಪ್ರಹ್ಲಾದ್ ಜೋಷಿ ಕೂಡ ಇದ್ರು. ಉತ್ತರ ಪ್ರದೇಶ ಚುನಾವಣೆ ಹೊತ್ತಲ್ಲೇ ಈ ಚರ್ಚೆ ನಡೆದಿದ್ರೂ, ಚುಣಾವಣೆ ಬಗ್ಗೆ ಮೋದಿ ಯಾವುದೇ ಚರ್ಚೆ ನಡೆಸಿಲ್ಲ ಅಂತ ಗೊತ್ತಾಗಿದೆ. ಬದಲಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾಕೂಟ ಆಯೋಜಿಸೋದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಕ್ಷೇತ್ರದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಅಂತೆಲ್ಲಾ ಸಲಹೆ ಕೊಟ್ಟು ಕಳುಹಿಸಿದ್ದಾರೆ.
-masthmagaa.com
Contact Us for Advertisement