masthmagaa.com:
ದೋಣಿ ಮುಳುಗಡೆಯಾದ ಪರಿಣಾಮ ಕನಿಷ್ಠ 5 ಜನ ಮೃತಪಟ್ಟಿರೋ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮಯನ್ಮಾರ್ನಲ್ಲಿ ಕಿರುಕುಳಕ್ಕೆ ಒಳಗಾಗ್ತಿರೋ ಮುಸ್ಲಿಂ ಸಮುದಾಯದ ರೋಹಿಂಗ್ಯಾ ನಿರಾಶ್ರಿತರು ಬೇರೆ ದೇಶಗಳಿಗೆ ಪಲಾಯನ ಮಾಡೋ ವೇಳೆ ಘಟನೆ ಸಂಭವಿಸಿದೆ. 150 ರೋಹಿಂಗ್ಯಾಗಳನ್ನ ಇಂಡೋನೇಷ್ಯಾಗೆ ಹೊತ್ಯೊತ್ತುತ್ತಿದ್ದ ದೋಣಿ ಮುಳುಗಡೆಯಾಗಿ ಈ ಅವಾಂತರ ನಡೆದಿದೆ. ಇಂಡೋನೇಷ್ಯಾದ ಪಶ್ಚಿಮ ತೀರದಲ್ಲಿ ಈ ದುರಂತ ಸಂಭವಿಸಿದ್ದು, ತಕ್ಷಣವೇ ಅಲ್ಲಿನ ರಕ್ಷಣಾ ಸಿಬ್ಬಂದಿ ದೋಣಿಯಲ್ಲಿರೋ ಪ್ರಾಣ ಉಳಿಸಲು ಪ್ರಯತ್ನಿಸಿದೆ. ಈ ವೇಳೆ ಐವರು ಪ್ರಾಣ ಕಳ್ಕೊಂಡಿದ್ದು, ಉಳಿದವರನ್ನ ರಕ್ಷಿಸಲಾಗಿದೆ. ಈ ಬಗ್ಗೆ ವಿಶ್ವ ಸಂಸ್ಥೆ ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಮಯನ್ಮಾರ್ನಲ್ಲಿ ದಬ್ಬಾಳಿಕೆಗೆ ಒಳಗಾಗೊ ಈ ರೋಹಿಂಗ್ಯಾಗಳು ಪ್ರತಿ ವರ್ಷ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಜಲ ಸಾರಿಗೆ ಮೂಲಕ ಮಲೇಷಿಯಾ ಹಾಗೂ ಇಂಡೋನೇಷ್ಯಾಗಳತ್ತ ವಲಸೆ ಹೋಗ್ತಾರೆ. ಅದ್ರ ಭಾಗವಾಗಿ ಈ ದುರಂತ ನಡೆದಿದೆ.
-masthmagaaa.com
Contact Us for Advertisement