masthmagaa.com:
ಜನವರಿ 22ರಂದು ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರೋದ್ರಿಂದ ಮಸೀದಿಗಳಲ್ಲಿ “ಜೈ ಶ್ರೀ ರಾಮ್! ಜೈ ಜೈ ರಾಮ್! ಅಂತ ಘೋಷಣೆ ಮೊಳಗಿಸುವಂತೆ RSS ನ ರಾಷ್ಟ್ರೀಯ ಕಾರ್ಯ ಕಾರಣಿ ಸದಸ್ಯ ಇಂದ್ರೇಶ್ ಕುಮಾರ್ ಆಗ್ರಹಿಸಿದ್ದಾರೆ. ʻನಾವು ಪುರಾತನ ಕಾಲದಿಂದಲೂ ನಮ್ಮ ಪ್ರಾಚೀನ ದೇವರುಗಳನ್ನ ಆರಾಧಿಸ್ತಿದ್ದೇವೆ. ನಮ್ಮ ದೇಶದಲ್ಲಿನ ಶೇ.99 ರಷ್ಟು ಮುಸ್ಲಿಂ ಮತ್ತು ಇತರೆ ಧರ್ಮಿಯರು ಈ ಹಿಂದೆ ಹಿಂದೂ ಧರ್ಮದಲ್ಲೇ ಇದ್ರು, ತದ ನಂತರ ಕಾಲಕ್ರಮೇಣ ಬೇರೆ ಧರ್ಮಕ್ಕೆ ಬದಲಾಗಿದ್ದಾರೆ. ಆದ್ರೆ ಅವರೇನು ದೇಶ ಬದಲಾಯಿಸಿಲ್ಲ. ಹೀಗಾಗಿ ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾತೃತ್ವ, ಸೌಹಾರ್ದತೆ ಭಾವನೆಯಿಂದ ಕ್ರೈಸ್ತ, ಮುಸ್ಲಿಂ, ಸೇರಿದಂತೆ ಅನ್ಯ ಧರ್ಮಿಯರು ಪಾಲ್ಗೊಳ್ಳಿʼ ಅಂತ ಇಂದ್ರೇಶ್ ಕರೆ ನೀಡಿದ್ದಾರೆ.
-masthmagaa.com
Contact Us for Advertisement