masthmagaa.com:
2024ರ ಜನವರಿ 22ರಂದು ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರನ್ ಮಷೀನ್ ವಿರಾಟ್ ಕೊಹ್ಲಿ, ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಸೇರಿದಂತೆ 7 ಸಾವಿರ ಗಣ್ಯರಿಗೆ ಆಹ್ವಾನ ಕೊಡಲಾಗಿದೆ ಅಂತ ರಾಮ ಮಂದಿರ ಟ್ರಸ್ಟ್ ಹೇಳಿದೆ. ಈ ಸಮಾರಂಭಕ್ಕೆ ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ ಹಾಗೂ ಈ ಹಿಂದೆ ರಾಮಾಯಣ ಸೀರಿಯಲ್ನಲ್ಲಿ ಜನಪ್ರಿಯತೆ ಗಳಿಸಿದ್ದ ರಾಮನ ಪಾತ್ರಾಧಾರಿ ಅರುಣ್ ಗೋವಿಲ್, ಸೀತೆಯ ಪಾತ್ರಧಾರಿ ದೀಪಿಕಾ ಚಿಖ್ಲಿಯಾಗೂ ಆಹ್ವಾನ ನೀಡಲಾಗಿದೆ ಅಂತ ದೇವಾಲಯದ ಟ್ರಸ್ಟ್ ಹೇಳಿದೆ. 50 ರಾಷ್ಟ್ರಗಳ ತಲಾ ಒಬ್ಬರು ಪ್ರತಿನಿಧಿಗಳನ್ನ ಆಹ್ವಾನಿಸಲು ಪ್ರಯತ್ನ ನಡಿತಿದೆ ಅಂತ ಶ್ರೀರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಇನ್ನು ಆಹ್ವಾನ ಪಟ್ಟಿಯಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್, ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಪ್ರಮುಖರಾಗಿದ್ದಾರೆ. ದೇಶದ 4 ಸಾವಿರ ಸಂತರನ್ನು ಒಳಗೊಂಡಂತೆ ಸಾಹಿತಿ, ವಿಜ್ಞಾನಿ, ಸೇನಾ ಅಧಿಕಾರಿಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದ ಪ್ರಮುಖರನ್ನ ಭವ್ಯ ಸಮಾರಂಭಕ್ಕೆ ಆಮಂತ್ರಿಸಲಾಗಿದೆ ಅಂತ ಟ್ರಸ್ಟ್ ತಿಳಿಸಿದೆ. ಒಟ್ಟು 4 ಸಾವಿರ ಸಂತರು ಸೇರಿದಂತೆ 3 ಸಾವಿರ VIPಗಳು ಮತ್ತು ಈ ಹಿಂದೆ ಅಯೋಧ್ಯೆಯಲ್ಲಿ ಪೋಲಿಸರ ಗುಂಡೆಟಿಗೆ ಬಲಿಯಾದ 50 ಕರ ಸೇವಕರ ಕುಟುಂಬಗಳಿಗೂ ಆಹ್ವಾನ ನೀಡಿದ್ದೇವೆ ಅಂತ ರಾಮ ಮಂದಿರ ಟ್ರಸ್ಟ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ರಾಮ ಮಂದಿರ ಹೋರಾಟಕ್ಕೆ ಬೆಂಬಲಿಸಿದ ಪತ್ರಕರ್ತರನ್ನು ಈ ಭವ್ಯ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅವರಿಲ್ಲದೇ ನಮ್ಮ ಹೋರಾಟ ವ್ಯರ್ಥವಾಗ್ತಿತ್ತು ಅಂತ ವಿಶ್ವ ಹಿಂದೂ ಪರಿಷತ್ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ. ಇದೇ ವೇಳೆ ಆಹ್ವಾನಿತರು ರಿಜಿಸ್ಟ್ರೇಶನ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಬಾರ್ ಕೋಡ್ ಸೃಷ್ಠಿಸಿ ಎಂಟ್ರಿ ಪಾಸ್ ನೀಡಲಾಗುತ್ತೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement