ಮಾಜಿ ಸಿಎಂ ಉದ್ಧವ್‌ ಠಾಕ್ರೆಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌!

masthmagaa.com:

ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್‌ ಠಾಕ್ರೆಗೆ ಶಿವಸೇನೆ ಪಕ್ಷದ ಮೇಲಿನ ಹಿಡಿತದ ಹೋರಾಟದಲ್ಲಿ ಸುಪ್ರೀಂಕೋರ್ಟ್‌ ಇಂದು ಬಿಗ್‌ ರಿಲೀಫ್‌ ನೀಡಿದೆ. ಠಾಕ್ರೆ ಬಣದ ಪ್ರತಿಸ್ಪರ್ಧಿಯಾಗಿರೋ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಬಣದ ಅರ್ಜಿಯನ್ನ ಸದ್ಯಕ್ಕೆ ನಿರ್ಧರಿಸಬೇಡಿ ಅಂತ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಶಾಸಕರ ಅನರ್ಹತೆ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆನೇ ಇನ್ನು ಆಗಿಲ್ಲ. ಆದ್ದರಿಂದ ಚುನಾವಣಾ ಆಯೋಗ ನಿಜವಾದ ಪಕ್ಷ ಯಾರು ಅಂತ ನಿರ್ಧಾರ ಮಾಡೋದನ್ನ ತಡೀಬೇಕು ಅಂತ ಉದ್ದವ್‌ ಬಣ ಅರ್ಜಿ ಸಲ್ಲಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ ಈ ರೀತಿ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply