ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ: ಸಿಎಂ ಸಿದ್ದರಾಮಯ್ಯ!

masthmagaa.com:

ರಾಜ್ಯದಲ್ಲಿ ಅದ್ರಲ್ಲೂ ರಾಜಧಾನಿ ಬೆಂಗಳೂರು ನೀರಿನ ಅಭಾವಕ್ಕೆ ಸಿಲುಕಿ ಒದ್ದಾಡ್ತಿದೆ. ಇದ್ರ ಮಧ್ಯೆಯೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯೇ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ʻನೀರಿನ ವಿಚಾರವಾಗಿ ಸುಮ್ಮನೆ ಕೆಲವೊಮ್ಮೆ ಊಹಾಪೋಹದ ಸುದ್ದಿ ಬರಿತಾರೆʼ ಅಂತ ಮಾಧ್ಯಮಗಳ ವಿರುದ್ದವೇ ವಾಗ್ದಾಳಿ ನಡೆಸಿದ್ದಾರೆ. ʻಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಒಂದೆರಡು ಕಡೆ ನೀರಿನ ಸಮಸ್ಯೆ ಇದೆ ಅಷ್ಟೇ. ಅದನ್ನ ಬಗೆಹರಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಚುನಾವಣೆ ಇರೋದ್ರಿಂದ ಸಭೆ ನಡೆಸಲು ಆಗ್ತಿಲ್ಲ. ಹೀಗಾಗಿ ಯಾವ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡ್ಕೊತಾರೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply