ಕರ್ನಾಟಕದ ಸಾಹಿತಿಗಳಾದ ಸುಧಾಮೂರ್ತಿ ಹಾಗೂ ಎಸ್‌.ಎಲ್‌ ಭೈರಪ್ಪರಿಗೆ ಒಲಿದ ʻಪದ್ಮಭೂಷಣʼ!

masthmagaa.com:

ರಾಷ್ಟ್ರಪತಿ ಭವನದಲ್ಲಿ ನೆನ್ನೆ ನಡೆದ ಸಮಾರಂಭದಲ್ಲಿ 53 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ʻಪದ್ಮʼ ಪ್ರಶಸ್ತಿಗಳನ್ನ ಪ್ರದಾನ ಮಾಡಿ ಗೌರವಿಸಿದ್ದಾರೆ. ರಾಜ್ಯದ ಸಾಹಿತಿಗಳಾದ ಸುಧಾಮೂರ್ತಿ ಹಾಗೂ ಎಸ್‌.ಎಲ್‌. ಭೈರಪ್ಪ ಅವ್ರಿಗೆ ಪದ್ಮಭೂಷಣ ಸೇರಿದಂತೆ ಒಟ್ಟು 8 ಜನ ಕರ್ನಾಟಕದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತರಿದ್ರು. ಈ ವೇಳೆ ಪದ್ಮಶ್ರಿ ಪ್ರಶಸ್ತಿ ಪಡೆದ ಬಿದ್ರಿ ಕಲಾವಿದ ರಶೀದ್‌ ಅಹ್ಮದ್‌ ಖ್ವಾದ್ರಿ ಪ್ರಧಾನಿ ಮೋದಿ ಅವ್ರನ್ನ ಹಾಡಿ ಹೊಗಳಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಸಮಯದಲ್ಲಿ ನಾನು ಪದ್ಮ ಪ್ರಶಸ್ತಿಗಾಗಿ ಎದುರು ನೋಡ್ತಿದ್ದೆ. ಆದ್ರೆ ನನಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಬಳಿಕ ಬಿಜೆಪಿ ಸರ್ಕಾರ ಬಂದಾಗ ಇನ್ನ ನನಗೆ ಯಾವುದೇ ಪ್ರಶಸ್ತಿ ಸಿಗಲ್ಲ ಅನ್ಕೊಂಡಿದ್ದೆ . ಆದ್ರೆ ನೀವದನ್ನ ತಪ್ಪು ಅಂತ ಸಾಬೀತು ಮಾಡಿದ್ರಿ. ಹೀಗಾಗಿ ನಾನು ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನ ತಿಳಿಸುತ್ತೇನೆ ಅಂತ ಖ್ವಾದ್ರಿ ಹೇಳಿದ್ದಾರೆ. ಅಂದ್ಹಾಗೆ ಒಟ್ಟು 106 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದ್ದು, ಮೊದಲ ಹಂತದಲ್ಲಿ ಮಾರ್ಚ್‌ 22ರಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply