masthmagaa.com:
ಶಾಲಾ ಶಿಕ್ಷಕಿಯೊಬ್ರನ್ನ ಕೊಲೆ ಮಾಡಿ ಆಕೆಯನ್ನ ಹೂತು ಹಾಕಿದ್ದ ಆರೋಪಿಯನ್ನ, ಘಟನೆ ನಡೆದ 30 ಗಂಟೆಗಳ ಒಳಗೆ ಅರೆಸ್ಟ್ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆ ಬಳಿ ಈ ಘಟನೆ ನಡೆದಿದೆ. ಅರೆಸ್ಟ್ ಆಗಿರೋ ಆರೋಪಿಯನ್ನ 21 ವರ್ಷದ ನಿತೀಶ್ ಅಂತ ಗುರುತಿಸಲಾಗಿದೆ. ಅಂದ್ಹಾಗೆ ಮೃತ ಶಿಕ್ಷಕಿ ದೀಪಿಕಾರನ್ನ ಮೇಲುಕೋಟೆ ಬೆಟ್ಟದ ತಪ್ಪಲಿಗೆ ಬರಹೇಳಿ, ಆರೋಪಿ ನಿತೀಶ್ ಹತ್ಯೆ ಮಾಡಿದ್ದಾನೆ. ನಂತ್ರ ಆಕೆಯ ಮೃತದೇಹವನ್ನ ಮೊದಲೇ ರೆಡಿ ಮಾಡಿಕೊಂಡಿದ್ದ ಗುಂಡಿಯಲ್ಲಿ ಹೂತು ಹಾಕಿದ್ದಾನೆ. ಮಗಳು ನಾಪತ್ತೆಯಾಗಿದ್ದಕ್ಕೆ ಕಂಗಾಲಾಗಿದ್ದ ತಂದೆಗೆ ತಾನೇ ಕಾಲ್ ಮಾಡಿ, ದೀಪಿಕಾ ಅಕ್ಕ ಸಿಕ್ಕಿದ್ರಾ ಅಂತ ಕೇಳಿದ್ದಾನೆ. ಪೊಲೀಸರು ತನಿಖೆ ಶುರು ಮಾಡಿದ್ಮೇಲೆ ಪಲಾಯನ ಮಾಡಿ, ವಿಜಯನಗರದ ಹೊಸಕೋಟೆ ಬಳಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಈ ಕೇಸ್ ಬಗ್ಗೆ ಮೇಲುಕೋಟೆ ಪೊಲೀಸ್ ಸ್ಟೇಷನ್ನಲ್ಲಿ ವಿಚಾರಣೆ ನಡೆದಿದೆ. ಕೊಲೆ ಮಾಡಿರೋದು ತಾನೇ ಅಂತ ಆರೋಪಿ ಒಪ್ಕೊಂಡಿದ್ದಾನೆ.
-masthmagaa.com
Contact Us for Advertisement