ಹೈದರಾಬಾದ್‌ನಲ್ಲಿ ಜಮೀರ್‌ ತಂಗಿದ್ದ ಹೋಟೆಲ್‌ ಮೇಲೆ ಪೋಲಿಸರು ದಾಳಿ ಮಾಡಿದ್ದೇಕೆ?

masthmagaa.com:

ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿರೋ ಸಚಿವ ಜಮೀರ್‌ ಅಹಮದ್‌ ತಂಗಿದ್ದ ಹೋಟೆಲ್‌ ಮೇಲೆ ಪೊಲಿಸರು ದಾಳಿ ನಡೆಸಿದ್ದಾರೆ. ತೆಲಂಗಾಣದ ಚುನಾವಣೆಯಲ್ಲಿ ಅಕ್ರಮ ಹಣ ಸಾಗಾಣೆಗೆ ಸಂಬಂಧಿಸಿದಂತೆ ಬಗ್ಗೆ ಪೋಲಿಸರು ಹೈದರಾಬಾದ್‌ನ ಪಾರ್ಕ್‌ ಹಯಾತ್‌ ಹೋಟೆಲ್‌ನಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಜಮೀರ್‌ ಕೇಂದ್ರದಲ್ಲಿ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಬಿಆರ್ಎಸ್‌ ಪಕ್ಷಗಳು ಹತಾಶೆಯಿಂದ ಹೀಗೆ ಮಾಡ್ತಿವೆ. ಹಾಗೂ ನಮ್ಮನ್ನ ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರ ಇದಾಗಿದೆ ಅಂತಾ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply