ಕೇರಳದಲ್ಲಿ ಬಹಿರಂಗ ಚರ್ಚೆಗೆ ಸಿದ್ದವಾದ ಮಾಜಿ, ಹಾಲಿ ಕೇಂದ್ರ ಸಚಿವರು!

masthmagaa.com:

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಓಪನ್‌ ಡಿಬೇಟ್‌ ನಡೆಸೋದನ್ನ ನಾವು ನೋಡಿದೀವಿ. ಇದೀಗ ಕೇರಳದಲ್ಲಿ ತಿರುವನಂತರಪುರಂನಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ IT ಸಚಿವ, ರಾಜೀವ್‌ ಚಂದ್ರಶೇಖರ್‌ ಓಪನ್‌ ಡಿಬೇಟ್‌ ಸವಾಲು ಹಾಕಿದ್ರು. ಆ ಸವಾಲನ್ನ ಕಾಂಗ್ರೆಸ್‌ ಅಭ್ಯರ್ಥಿ ಹಾಲಿ ತಿರುವನಂತಪುರಂ ಎಂಪಿ ಶಶಿ ತರೂರ್‌ ಒಪ್ಕೊಂಡಿದ್ದಾರೆ. ಚಂದ್ರಶೇಖರ್‌, ಐಡಿಯಾಸ್‌ ಬಗ್ಗೆ, ಡೆವಲಪ್‌ಮೆಂಟ್‌ ಹಾಗು ಯಾರ ಟ್ರ್ಯಾಕ್‌ ರೆಕಾರ್ಡ್‌ ಬೆಟರ್‌ ಅನ್ನೋದನ್ನ ಚರ್ಚೆ ಮಾಡೋದಕ್ಕೆ ನಾನು ರೆಡಿ ಇದ್ದೇನೆ. ಆರಂಭದಿಂದ ನಾನು ಇದ್ರ ಬಗ್ಗೆ ಹೇಳ್ತಿದ್ದೇನೆ ಅಂದಿದ್ದಾರೆ. ಈ ವಿಡಿಯೋ ಹಂಚಿಕೊಂಡಿರೋ ತರೂರ್‌, ಡೆವಲಪ್‌ಮೆಂಟ್‌, ಪಾಲಿಟಿಕ್ಸ್‌, ನಿರುದ್ಯೋಗ, ಭ್ರಷ್ಟಾಚಾರ, ತಿರುವನಂತರಪುರಂ ಅಭಿವೃದ್ದಿ ಎಲ್ಲದರ ಬಗ್ಗೆ ಡಿಸ್ಕಸ್‌ ಮಾಡೋಣ ಅಂದಿದ್ದಾರೆ.

-masthmagaa.com

Contact Us for Advertisement

Leave a Reply