masthmagaa.com:
ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸೋಕೆ ಕೋರ್ಟ್ ಅವಕಾಶ ಮಾಡಿಕೊಟ್ಟ ವಿಚಾರವಾಗಿ ಟಿಎಂಸಿ ನಾಯಕ ಸಿದಿಕುಲ್ಲಾ ಚೌಧುರಿ ರಿಯಾಕ್ಟ್ ಮಾಡಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ವಾರ್ನಿಗ್ ಕೊಟ್ಟಿರೋ ಸಿದ್ದಿಕುಲ್ಲಾ, ಯೋಗಿ ಬಂಗಾಳಕ್ಕೆ ಬಂದ್ರೆ, ನಾವು ಅವ್ರನ್ನ ಸುತ್ತುವರೀತೀವಿ, ಮುತ್ತಿಗೆ ಹಾಕ್ತೀವಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಹಿಂದೂಗಳು ಇಮೀಡಿಯೇಟಾಗಿ ಗ್ಯಾನವಾಪಿಯನ್ನ ಖಾಲಿ ಮಾಡ್ಬೇಕು. ಗ್ಯಾನವಾಪಿಯಲ್ಲಿ ಹಿಂದೂ ಪೂಜೆ ಬ್ಯಾನ್ಗಾಗಿ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ, ಹಿಂದೂಗಳಿಗೆ ಇಂಥಾ ಅವಕಾಶ ಕೊಟ್ಟಿರೋ ಯೋಗಿ ಆದಿತ್ಯನಾಥ್ಗೆ ಸೆನ್ಸ್ ಏನಾದ್ರು ಇದೆಯಾ? ನಾವೇನಾದ್ರು ದೇವಸ್ಥಾನಗಳಿಗೆ ಗೋಗಿ ಪ್ರಾರ್ಥನೆ ಮಾಡ್ತೀವ? ಮಸೀದಿಯನ್ನ ದೇವಸ್ಥಾನ ಮಾಡ್ತೀನಿ ಅಂದ್ರೆ ನಾವು ಸುಮ್ಮನಿರೋಲ್ಲ. 800 ವರ್ಷಗಳಿಂದ ಮಸೀದಿ ಅಲ್ಲೇ ಇದೆ. ಯೋಗಿ ಏನಾದ್ರು ಬಂಗಾಳಕ್ಕೆ ಬಂದು ಕೂತ್ಕೊಂಡ್ರೆ, ಅವರನ್ನ ವಾಪಸ್ ಹೋಗೋಕೆ ಬಿಡಲ್ಲ ಅಂತ ಧಮ್ಕಿ ಹಾಕಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರೋ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಮಮತಾ ಬ್ಯಾನರ್ಜಿ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ಒಂದು ನಿರ್ದಿಷ್ಟ ಸಮುದಾಯದ ರಕ್ಷಕ ರಾಜ್ಯ ಆಗೋಗಿದೆ. ರೊಹಿಂಗ್ಯಾಗಳನ್ನ ರೆಡ್ ಕಾರ್ಪೆಟ್ ಹಾಕಿ ಬರಮಾಡಿಕೊಳ್ತಾರೆ. ಸಿಎಂ ಯೋಗಿಗೆ ಬೆದರಿಕೆ ಹಾಕೋದನ್ನ ಒಪ್ಪಲ್ಲ. ಅವ್ರು ಪಶ್ಚಿಮ ಬಂಗಾಳಕ್ಕೆ ಹೋಗೆ ಹೋಗ್ತಾರೆ ಅಂತ ಕಿಡಿಕಾರಿದ್ದಾರೆ.
-masthmagaa.com
Contact Us for Advertisement