masthmagaa.com:
ಕಳೆದ ವರ್ಷದ ರಾಜಸ್ಥಾನದ ಉದಯ್ಪುರ್ನಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ಅನ್ನೋರನ್ನ ಹತ್ಯೆ ಮಾಡಿದ್ದ ಮುಸ್ಲಿಂ ಯುವಕರಿಗೆ BJP ಲಿಂಕ್ ಇತ್ತು ಅಂತ ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅಂದ್ಹಾಗೆ ಪ್ರೋಫೆಟ್ ಮೊಹಮದ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದ BJP ನಾಯಕಿ ನುಪುರ್ ಶರ್ಮ ಬೆಂಬಲಿಸಿ ಈ ಟೈಲರ್ ಪೋಸ್ಟ್ ಒಂದನ್ನು ಹಾಕಿದ್ರು. ಇದೇ ಕಾರಣಕ್ಕೆ ಇಬ್ಬರು ಮುಸ್ಲಿಂ ಯುವಕರು ಟೈಲರನ್ನು ಭೀಕರವಾಗಿ ಕೊಂದಿದ್ರು. ಈಗ ಈ ಬಗ್ಗೆ ಗೆಹ್ಲೋಟ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. “ಕೇಸರಿ ಪಕ್ಷ ಕಳೆದ ನವೆಂಬರ್ನಲ್ಲಿ ವಿಧಾನಸಭೆ ಚುನಾವಣೆ ಇದ್ದಿದ್ರಿಂದ ಕೋಮು ಗಲಭೆ ಆಗಬಾರ್ದು ಅಂತ ಕೇಸನ್ನ ಮುಚ್ಚಾಕೋಕೆ ಪ್ರಯತ್ನ ಮಾಡಿದೆ. ಪ್ರಕರಣವನ್ನ NIA ಬದಲಾಗಿ ರಾಜಸ್ಥಾನ್ ಪೊಲೀಸ್ನ Special Operations Group (SOG)ಗೆ ನೀಡಿದ್ರೆ, ತನಿಖೆ ಇನ್ನು ಚೆನ್ನಾಗಿ ಆಗ್ತಿತ್ತು. ಘಟನೆ ನಡೆದ ಕೂಡಲೆ NIA ಗೆ ಒಪ್ಪಿಸಲಾಯ್ತು. ಆಗಿನ ರಾಜ್ಯ ಸರ್ಕಾರ ಇದ್ರ ಬಗ್ಗೆ ಏನೂ ಮಾತನಾಡ್ಲಿಲ್ಲ. ಅಪರಾಧಿಗಳಿಗೆ BJP ಲಿಂಕ್ ಇತ್ತು. ಘಟನೆ ನಡೆದ ಕೆಲ ದಿನಗಳ ಹಿಂದೆ ಇವ್ರು ಬೇರೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾಗ, ಕೆಲ BJP ನಾಯಕರು ಪೊಲೀಸ್ ಠಾಣೆಗೆ ಹೋಗಿ ಇವ್ರನ್ನ ಬಿಡಿಸಿದ್ರು” ಅಂತ ಗಂಭೀರ ಆರೋಪ ಮಾಡಿದ್ದಾರೆ.
-masthmagaa.com
Contact Us for Advertisement