masthmagaa.com:
ಉತ್ತರ ಪ್ರದೇಶದಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದೆ. ವಿಧಾನಸಭೆಯಲ್ಲಿ ಮಹಿಳಾ ಶಾಸಕಿಯರು ಮಾತನಾಡೋಕೆ ಸಂಪೂರ್ಣ ಕಲಾಪವನ್ನ ಮೀಸಲಿಡಲಾಗಿದೆ. ಈ ಬಗ್ಗೆ ಮಾತಾಡಿದ ಸಿಎಂ ಯೋಗಿ ಆದಿತ್ಯನಾಥ್, ಸರ್ಕಾರ ಮಹಿಳೆಯರಿಗೆ ಉತ್ತೇಜನ ನೀಡುವತ್ತ ಗಮನ ಹರಿಸ್ತಿದೆ. ಸದನದಲ್ಲಿ ಪುರುಷ ಶಾಸಕರ ಧ್ವನಿ ಹಿಂದೆ ಶಾಸಕಿಯರ ಧ್ವನಿ ಮುಚ್ಚಿಹೋಗಿದೆ. ಇಂದು ಅವರ ಮಾತುಗಳನ್ನ ಕೇಳಿ ತಮ್ಮ ತಪ್ಪನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ. ಇನ್ನು ಸದನದಲ್ಲಿ ಶಾಸಕಿಯರು, ಮಹಿಳೆಯರ ವಿರುದ್ದದ ಅಪರಾಧಗಳು, ಹಣದುಬ್ಬರ ಹಾಗೂ ನಿರುದ್ಯೋಗದ ಬಗ್ಗೆ ಮಾತಾಡಿದ್ದಾರೆ.
-masthmagaa.com
Contact Us for Advertisement