ಅಮಿತ್‌ ಶಾ, ಜೈಶಂಕರ್‌ ಹಾಗೂ ಕೆನಡಾದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಖಲಿಸ್ತಾನಿ ಉಗ್ರ!

masthmagaa.com:

ಮೋಸ್ಟ್‌ ವಾಂಟೆಡ್‌ ಖಲಿಸ್ತಾನ ಉಗ್ರ ಗುರುಪಂತ್‌ ಪನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ಕೆನಡಾದಲ್ಲಿರುವ ಭಾರತದ ಹೈಕಮಿಷನರ್‌ ಸಂಜಯ್‌ ವರ್ಮಾ ಅವ್ರು ನಮ್ಮ ಟಾರ್ಗೆಟ್‌ ಅಂತ ಬೆದರಿಕೆ ಹಾಕಿದ್ದಾನೆ. ಈ ಕುರಿತು ವಿಡಿಯೋ ಒಂದನ್ನ ರಿಲೀಸ್‌ ಮಾಡಿದ್ದು, ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಸಾವಿಗೆ ಈ ಮೂವರೇ ಕಾರಣ ಅಂತ ಆರೋಪಿಸಿದ್ದಾನೆ. ಅಲ್ದೆ ಈ ಮೂವರು ನಾಯಕರ ವಿದೇಶಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತೆ ಅಂತ ಘೋಷಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗ್ತಿದೆ. ಇನ್ನು ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕೋದನ್ನ ಫ್ರೀಡಂ ಆಫ್‌ ಸ್ಪೀಚ್‌ ಅನ್ನೋದಕ್ಕೆ ಆಗಲ್ಲ ಹಾಗೂ ಇದನ್ನ ಭಾರತ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply