ಉತ್ತರಾಖಂಡ್‌ ಗುರುದ್ವಾರ ಕೇಸ್:‌ ಮಾಜಿ IAS ಅಧಿಕಾರಿ ಮೇಲೆ FIR

masthmagaa.com:

ಉತ್ತರಾಖಂಡದ ಗುರುದ್ವಾರ ಒಂದರ ಮುಖ್ಯಸ್ಥರ ಹತ್ಯೆ ಕೇಸ್‌ನಲ್ಲಿ ನಿವೃತ್ತ IAS ಅಧಿಕಾರಿ ಸೇರಿ 5 ಮಂದಿ ಮೇಲೆ ಕೇಸ್‌ ದಾಖಲಾಗಿದೆ. ಗುರುವಾರ ಗುರುದ್ವಾರದ ಆವರಣದಲ್ಲೇ ಬಾಬಾ ತಾರ್ಸೆಮ್‌ ಸಿಂಗ್‌ ಅನ್ನೋರನ್ನ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈಗ ಮಾಜಿ IAS ಅಧಿಕಾರಿ ಸೇರಿ ಐವರು ಸಿಖ್ಖರ ಹೆಸರನ್ನ FIRನಲ್ಲಿ ಉಲ್ಲೇಖಿಸಲಾಗಿದೆ. ಈ ಐವರು ಪ್ಲಾನ್‌ ಮಾಡಿ ಉತ್ತರಾಖಂಡ್‌ನ ಉಧಮ್‌ ಸಿಂಗ್‌ ನಗರ್‌ ಜಿಲ್ಲೆಯ ರುದ್ರಾಪುರ ಬಳಿಯ ನಾನಕ್‌ಮಟ್ಟ ಸಾಹಿಬ್‌ ಗುರುದ್ವಾರದಲ್ಲಿ ಈ ಕೃತ್ಯ ಎಸಗಿದ್ರು.

-masthmagaa.com

Contact Us for Advertisement

Leave a Reply