ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರು ಮೆಟ್ರೋ ಜಲಾವೃತ! ಸರ್ಕಾರದ ವಿರುದ್ದ ಜನ ಸಿಡಿಮಿಡಿ!

masthmagaa.com:

ಇತ್ತೀಚೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದ ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣ ನಿನ್ನೆ ಸುರಿದ ಮಳೆಗೆ ಜಲಾವೃತವಾಗಿದೆ. ನಿನ್ನೆ ರಾತ್ರಿ ಬಂದ ಮಳೆಯಿಂದಾಗಿ ವೈಟ್‌ಫೀಲ್ಡ್‌ನಿಂದ ಕೆ ಆರ್‌ ಪುರಂ ನಡುವಿನ ಹೊಚ್ಚ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೀರು ತುಂಬಿಕೊಂಡಿದೆ. ನಿಲ್ದಾಣದ ಹೌಸ್‌ ಕೀಪಿಂಗ್‌ ಸಿಬ್ಬಂದಿ ನೀರನ್ನ ತುಂಬ್ತಿರೋದು ವಿಡಿಯೋದಲ್ಲಿ ಕಂಡುಬಂದಿದೆ. ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ರೆ ಹೀಗೆ ಆಗುತ್ತೆ ಅಂತ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಕಾಂಗ್ರೆಸ್‌ ಕೂಡ ರಿಪ್ಲೈ ಮಾಡಿದ್ದು, ಮೋದಿ ಉದ್ಘಾಟಿಸಿದ ಬೆಂಗಳೂರು-ಮೈಸೂರು ಹೆದ್ದಾರಿ ಒಂದು ಸಾಧಾರಣ ಮಳೆಗೆ ಮುಳುಗಿತ್ತು. ಈಗ ಮೋದಿ ಉದ್ಘಾಟಿಸಿದ ಮೆಟ್ರೋ ನಿಲ್ದಾಣ ಕೂಡ ಒಂದು ಸಣ್ಣ ಮಳೆಗೆ ಮುಳುಗಿದೆ. ಕಾಮಗಾರಿ ಮುಗಿಯುವ ಮುನ್ನವೇ ಉದ್ಘಾಟನೆಗೆ ಹಾತೊರೆಯುವ ಪ್ರಚಾರ ಜೀವಿಗೆ ಜನರ ಹಿತ ಮುಖ್ಯವಲ್ಲ, ಪ್ರಚಾರವೇ ಮುಖ್ಯ. ಮೆಟ್ರೋ ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ್ದು 40% ಕಮಿಷನ್‌ಗೆ ಸಾಕ್ಷಿ ಅಂತ ವ್ಯಂಗ್ಯವಾಡಿದೆ.

-masthmagaa.com

Contact Us for Advertisement

Leave a Reply