ಯಡಿಯೂರಪ್ಪರನ್ನ ಇಡೀ ದೇಶವೇ ನೆನೆಯಬೇಕು: ಅಮಿತ್‌ ಶಾ

masthmagaa.com:

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನ ಕಡೆಗಣಿಸುತ್ತಿದೆ ಅನ್ನೋ ವಿಚಾರ ಮತ್ತೆ ಮುನ್ನೆಲೆಗೆ ಬರ್ತಿದ್ದಂತೆ ರಾಜ್ಯದಲ್ಲಿ ಕುತೂಹಲದ ಬೆಳವಣಿಗಳು ನಡೀತಾ ಇವೆ. ಕಳೆದ ಕೆಲದಿನಗಳ ಹಿಂದೆ ತಾನೇ ರಾಜ್ಯ ಬಿಜೆಪಿ ಸರ್ಕಾರ ಶಿವಮೊಗ್ಗ ಏರ್ಪೋರ್ಟ್‌ಗೆ ಯಡಿಯೂರಪ್ಪ ಅವರ ಹೆಸರು ಇಡೋದಾಗಿ ಘೋಷಣೆ ಮಾಡಿತ್ತು. ಸಿಎಂ ಬೊಮ್ಮಾಯಿ ಈ ಘೋಷಣೆ ಮಾಡಿದ್ರು. ಯಡಿಯೂರಪ್ಪರ ಕಡೆಗಣನೆ ಆಗ್ತಿದೆ ಅನ್ನೋ ಆರೋಪಕ್ಕೆ ಪ್ರತಿಯಾಗಿ ಅವರನ್ನ ಸಮಾಧಾನ ಮಾಡೋಕೆ ಬಿಜೆಪಿ ಈ ರೀತಿ ಮಾಡ್ತಿದೆ ಅಂತ ಹೇಳಲಾಗ್ತಿತ್ತು. ಆದ್ರೆ ಈಗ ಖುದ್ದು ಬಿಎಸ್‌ವೈ ಮಾತನಾಡಿದ್ದು ನನ್ನ ಹೆಸರು ಇಡುವ ಪ್ರಶ್ನೆಯೇ ಇಲ್ಲ. ಶಿವಮೊಗ್ಗ ಏರ್ಪೋರ್ಟ್‌ಗೆ ಮಹಾನ್‌ ರಾಷ್ಟ್ರಭಕ್ತ ಕುವೆಂಪು ಅವರ ಹೆಸರು ಇಡಲಾಗುತ್ತೆ ಅಂತ ಹೇಳಿದ್ದಾರೆ. ಇತ್ತ ಇನ್ನೊಂದ್ಕಡೆ ನಿನ್ನೆ ಕರಾವಳಿಗೆ ಬಂದಿದ್ದ ಬಿಜೆಪಿ ಚಾಣಕ್ಯ, ಅಮಿತ್‌ ಶಾ, ಯಡಿಯೂರಪ್ಪರನ್ನ ಹಾಡಿ ಹೊಗಳಿದ್ದು ಯಡಿಯೂರಪ್ಪ ಅವರ ರೈತಪರ ಯೋಜನೆಗಳಿಂದ ಇಡೀ ದೇಶವೇ ಅವರನ್ನ ಇವತ್ತು ನೆನೆದುಕೊಳ್ಳುತ್ತಿದೆ ಅಂತ ಹೇಳಿದ್ದಾರೆ. ಇದು ರಾಜ್ಯ ಹಾಗೂ ಕೇಂದ್ರ ನಾಯಕರು ಯಡಿಯೂರಪ್ಪರನ್ನ ಸಮಾಧಾನ ಮಾಡೋ ಪ್ರಯತ್ನ ಅಂತ ರಾಜಕೀಯ ವಲಯದಲ್ಲಿ ಚರ್ಚೆಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply