masthmagaa.com:
ಪ್ರಶ್ನೆಗಾಗಿ ಹಣ ಪಡೆದ ಪ್ರಕರಣ ಸಂಬಂಧಿಸಿ ನೈತಿಕ ಸಮಿತಿಯ ರಿಪೋರ್ಟ್ ಲೋಕಸಭೆ ಮುಂದೆ ಮಂಡನೇಯಾಗೋ ಮೊದಲೇ ಲೀಕ್ ಮಾಡಲಾಗಿದೆ ಅಂತ ಸರ್ವಪಕ್ಷ ಸಭೆಯಲ್ಲಿ TMC ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ರು. ಇದೀಗ ರಿಪೋರ್ಟ್ ಲೀಕ್ ಆಗಿರೋ ಬಗ್ಗೆ ಕೇಳಿದಾಗ TMC ಸಂಸದೆ ಮಹುವಾ ಮೊಯಿತ್ರಾ ಅವ್ರು ಮಾತನಾಡೋಕೆ ನಿರಾಕರಿಸಿದ್ದಾರೆ. ʻಲೋಕಸಭೆ ಮುಂದೆ ರಿಪೋರ್ಟ್ ಮಂಡನೆಯಾಗ್ದೇ ನಾನು ಏನಂತ ಹೇಳೋದು. ಮಂಡನೆ ಮಾಡಿದಿದ್ರೆ, ನಾನೇನಾದ್ರು ಹೇಳ್ಬೋದಿತ್ತು. ಆದ್ರಿಂದ ನೈತಿಕ ಸಮಿತಿಯ ರಿಪೋರ್ಟ್ ಲೋಕಸಭೆ ಮುಂದಿಟ್ಟ ನಂತರವೇ ನಾನು ಈ ಬಗೆ ಮಾತನಾಡ್ತೀನಿʼ ಅಂತ ಹೇಳಿದ್ದಾರೆ. ಇನ್ನೊಂದು ಕಡೆ ಮಹುವಾ ಮೊಯಿತ್ರಾ ಪ್ರಕರಣದ ಕುರಿತು ನೈತಿಕ ಸಮಿತಿಯ ರಿಪೋರ್ಟ್ ಲೀಕ್ ಅಗಿರೋ ಬಗ್ಗೆ ಇದೀಗ ಭಾರೀ ಚರ್ಚೆಗಳು ಕೂಡ ನಡೀತಿವೆ. ಈ ವಿಚಾರವಾಗಿ ಧ್ವನಿ ಎತ್ತಿರೋ ಬಿಜೆಪಿ ಸಂಸದ ನಿಶಿಕಾಂತ್ ದುಬೆ , ನೈತಿಕ ಸಮಿತಿಯ ರಿಪೋರ್ಟ್ ಲೀಕ್ ಆಗೋಕೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವ್ರೇ ಕಾರಣ. ಅವ್ರೇ ಈ ರಿಪೋರ್ಟ್ ಲೀಕ್ ಮಾಡಿದ್ದು ಅಂತ ಆರೋಪ ಮಾಡಿದ್ದಾರೆ. ʻನನಗೆ ನೈತಿಕ ಸಮಿತಿ ರಿಪೋರ್ಟ್ನಲ್ಲಿ ಏನು ಮೆನ್ಶನ್ ಮಾಡಲಾಗಿದೆ ಅಂತ ಗೊತ್ತಿಲ್ಲ. ನಾನು ಏನು ಹೇಳ್ಬೇಕೋ ಅದನ್ನ ನೈತಿಕ ಸಮಿತಿ ಮುಂದೆ ಹೇಳಿದ್ದೇನೆ. ಮೊದಲು ರಿಪೋರ್ಟ್ ಮಂಡನೆಯಾಗ್ಲಿ. ಆವಾಗ ನಾನು ಈ ಕುರಿತು ಮಾತನಾಡೋಕೆ ಆಗುತ್ತೆ. ರಿಪೋರ್ಟ್ ಹೇಗೆ ಲೀಕ್ ಆಯ್ತು ಅಂತ ನನಗೆ ಗೊತ್ತಿಲ್ಲ. ಆದ್ರೆ ನನ್ನ ಪ್ರಕಾರ ಅಧೀರ್ ರಂಜನ್ ಚೌಧರಿ ಅವ್ರು ರಿಪೋರ್ಟ್ ಲೀಕ್ ಮಾಡಿದ್ದಾರೆʼ ಅಂತ ಹೇಳಿದ್ದಾರೆ.
-masthmagaa.com
Contact Us for Advertisement