ಗ್ಯಾನವಾಪಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಯೋಗಿ ಆದಿತ್ಯನಾಥ್!

masthmagaa.com:

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಮಂಗಳವಾರ ವಾರಣಾಸಿಯ ಗ್ಯಾನವಾಪಿಗೆ ಭೇಟಿ ನೀಡಿದ್ದಾರೆ. ಗ್ಯಾನವಾಪಿ ಬೇಸ್‌ಮೇಟ್‌ನಲ್ಲಿ ಕಾಶಿಯ ಗ್ಯಾನವಾಪಿ ಮಸೀದಿ ವಿವಾದದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಡಿಸ್ಟ್ರಿಕ್ಟ್ ಕೋರ್ಟ್‌, ಮಸೀದಿಯ ಬೇಸ್‌ಮೇಟ್‌ನಲ್ಲಿರೋ ಸೀಲ್ಡ್‌ ಚೇಂಬರ್‌ನಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸೋಕೆ ಅವಕಾಶ ಕೊಟ್ಟಿತ್ತು. ಈಗಿರುವಾಗ್ಲೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ವ್ಯಾಸ್‌ ಕಾ ಟೆಹ್ಕಾನ್‌ಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ, ಸಾಂವಿಧಾನಿಕ ಹುದ್ದೆಯಲ್ಲಿರೋರು ಈ ವಿವಾದಿತ ಜಾಗಕ್ಕೆ, ಭೇಟಿ ಕೊಟ್ಟಿರೋದು ತುಂಬಾನೇ ಮಹತ್ವ ಪಡ್ಕೋತಿದೆ. ಅದರಲ್ಲೂ ಯೋಗಿ ಆದಿತ್ಯನಾಥ್‌ ವಿವಾದಿತ ಸ್ಥಳ ಇರೋ ರಾಜ್ಯದ ಮುಖ್ಯಮಂತ್ರಿ. ಹೀಗಾಗಿ ಇದು ಮತ್ತಷ್ಟು ಇಂಪಾರ್ಟೆನ್ಸ್‌ ಪಡ್ಕೋತಿದೆ. ಇತ್ತೀಚೆಗೆ ಕೋರ್ಟ್‌ ಪೂಜೆ ಸಲ್ಲಿಸೋಕೆ ಅವಕಾಶ ಮಾಡಿಕೊಟ್ಟ ವ್ಯಾಸ್‌ ಕಾ ಟೆಹ್ಕಾನದಲ್ಲಿ ಯೋಗಿ ಪೂಜೆ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply