masthmagaa.com:
ನೇಪಾಳ ಪ್ರಧಾನ ಮಂತ್ರಿ ಕೆ.ಪಿ ಶರ್ಮಾ ಒಲಿಯವರಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ಕೊಟ್ಟಿದೆ. ವಿಸರ್ಜನೆಗೊಳಿಸಿದ್ದ ಸಂಸತ್ನ್ನು ಪುನರ್ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಮತ್ತೆ ಆದೇಶಿಸಿದೆ. ಕಮ್ಯೂನಿಸ್ಟ್ ಪಕ್ಷದ ಮತ್ತೊಂದು ಬಣದ ನಾಯಕ ಪಿಕೆ ದಹಲ್ ಪ್ರಚಂಡ ಜೊತೆಗಿನ ನಿರಂತರ ಹಗ್ಗಜಗ್ಗಾಟದ ಬಳಿಕ ಡಿಸೆಂಬರ್ 20ರಂದು ಕೆಪಿ ಶರ್ಮಾ ಒಲಿ ಸಂಸತ್ ವಿಸರ್ಜಿಸಿ, ಏಪ್ರಿಲ್ 30 ಮತ್ತು ಮೇ 10ರಂದು ಚುನಾವಣೆ ಘೋಷಿಸಿದ್ರು. ಈ ಸಂಬಂಧ ಒಲಿ ವಿರೋಧಿ ಬಣ ಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಸಂಸತ್ ವಿಸರ್ಜನೆಯನ್ನು ಅಸಂವಿಧಾನಿಕ ಅಂತ ಕರೆದಿರುವ ಸುಪ್ರೀಂಕೋರ್ಟ್, 13 ದಿನಗಳ ಒಳಗಾಗಿ ಸದನವನ್ನು ಪುನರ್ ಸ್ಥಾಪಿಸಬೇಕೆಂದು ತೀರ್ಪು ನೀಡಿದೆ. ಇದ್ರಿಂದ ಸಂಸತ್ ವಿಸರ್ಜಿಸಿ ಎಲೆಕ್ಷನ್ಗೆ ಹೊರಟಿದ್ದ ಕೆಪಿ ಶರ್ಮಾ ಒಲಿ ಬುಡಕ್ಕೆ ಬಿಸಿನೀರು ಬಿಟ್ಟಂತಾಗಿದೆ. ಆದ್ರೆ ಕೋರ್ಟ್ನಲ್ಲಿ ಹಿನ್ನೆಡೆಯಾದ ಮಾತ್ರಕ್ಕೆ ಕೆಪಿ ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ.. ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಅಂತ ಅವರ ಆಪ್ತಮೂಲಗಳು ಹೇಳಿವೆ.
-masthmagaa.com
Contact Us for Advertisement