masthmagaa.com:
ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ವೈಫಲ್ಯ ಸಂಬಂಧ ತನಿಖಾ ಸಮಿತಿಯನ್ನು ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ರಚಿಸಲಾಗುತ್ತೆ. ಇದ್ರಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ಪಂಜಾಬ್ ಪೊಲೀಸರು ಕೂಡ ಭಾಗವಾಗಲಿದ್ದಾರೆ ಅಂತ ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಒನ್ ಸೈಡೆಡ್ ತನಿಖೆ ನಡೆಸಲು ಸಾಧ್ಯವಿಲ್ಲ. ಸ್ವತಂತ್ರ ತನಿಖೆ ನಡೆಯಬೇಕಿದೆ. ಈ ತನಿಖಾ ಸಮಿತಿ ಭದ್ರತಾ ವೈಫಲ್ಯಕ್ಕೆ ಕಾರಣವೇನು? ಯಾರು ಹೊಣೆ? ಮುಂದೆ ಹಾಗಾಗದಂತೆ ತಡೆಯಲು ಏನು ಮಾಡ್ಬೇಕು? ಅನ್ನೋದರ ಬಗ್ಗೆ ತನಿಖೆ ನಡೆಸಿ, ಆದಷ್ಟು ಬೇಗ ವರದಿ ಸಲ್ಲಿಸಬೇಕು ಅಂತ ಕೂಡ ಕೋರ್ಟ್ ಹೇಳಿದೆ. ಅಂದಹಾಗೆ ಎನ್ಐಎ ಡಿಜಿ, ಚಂಡೀಗಡ ಪೊಲೀಸ್ ಚೀಫ್, ಪಂಜಾಬ್ ಪೊಲೀಸ್ನ ಎಡಿಜಿ, ಪಂಜಾಬ್ ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೂಡ ಈ ಸಮಿತಿಯ ಭಾಗವಾಗಿರಲಿದ್ದಾರೆ.
-masthmagaa.com
Contact Us for Advertisement