ನ್ಯಾಯಾಂಗ ದುರ್ಬಲಕ್ಕೆ ಯತ್ನ: ಸಿಜೆಐಗೆ 600 ವಕೀಲರ ಪತ್ರ

masthmagaa.com:

ನ್ಯಾಯಾಂಗವನ್ನ ದುರ್ಬಲಗೊಳಿಸಲಾಗ್ತಿದೆ ಅಂತ 600ಕ್ಕೂ ಹೆಚ್ಚು ವಕೀಲರ ಗುಂಪು ಸಿಜೆಐಗೆ ಪತ್ರ ಬರೆದಿದೆ. ಆಯ್ದ ಟೀಕೆಗಳು ಮತ್ತು ಹೊಗಳಿಕೆಗಳ ಮೂಲಕ ನ್ಯಾಯಾಂಗದ ಸಮಗ್ರತೆಯನ್ನ ದುರ್ಬಲಗೊಳಿಸೋ ಪ್ರಯತ್ನ ಆಗ್ತಿದೆ. ಈ ನಿರ್ದಿಷ್ಟ ಗುಂಪು ನ್ಯಾಯಾಂಗದ ತೀರ್ಪುಗಳ ಮೇಲೆ, ಮುಖ್ಯವಾಗಿ ರಾಜಕೀಯ ವ್ಯಕ್ತಿಗಳು ಹಾಗೂ ಭ್ರಷ್ಟಾಚಾರ ಆರೋಪಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರಗಳನ್ನ ಅನುಸರಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಘನತೆಯನ್ನ ಕಾಪಾಡಲು ಕ್ರಮ ಕೈಗೊಳ್ಳಬೇಕು ಅಂತ ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರವಾಲ ಸೇರಿದಂತೆ 600 ಜನರ ಗುಂಪು ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.

-masthmagaa.com

Contact Us for Advertisement

Leave a Reply