masthmagaa.com:
ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್ನಲ್ಲಿ ಹಸಿವಿನಿಂದಾಗಿ 8 ಮಂದಿ ಮಕ್ಕಳು ಪ್ರಾಣ ಕಳ್ಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಹಜಾರಾ ಸಮುದಾಯದವರಾಗಿದ್ದಾರೆ ಅಂತ ಅಫ್ಘಾನಿಸ್ತಾನದ ಮಾಜಿ ಸಂಸದ ಹಜಿ ಮೊಹಮ್ಮದ್ ಮೊಹಖೆಕ್ ಹೇಳಿದ್ದಾರೆ. ತಾಲಿಬಾನಿಗಳ ಕೈಲಿ ಅಫ್ಘನ್ ಜನತೆಯ ಜೀವನ ಮಟ್ಟ ಖಾತ್ರಿಪಡಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿ ದೇಶದ ಹಜಾರಾ ಮತ್ತು ಶಿಯಾ ಸಮುದಾಯದ ಜನರಿಗೆ ಸಹಾಯ ಮಾಡ್ಬೇಕು ಅಂತ ಮೊಹಖೆಕ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ನಡುವೆ ಅಮೆರಿಕ ತಾಲಿಬಾನಿಗಳ ಜೊತೆ ಯುದ್ಧದಲ್ಲಿ ಸೋಲು ಕಾಣ್ತು. ಇದೇ ಕಾರಣಕ್ಕೆ ಅಮೆರಿಕ ತಾಲಿಬಾನಿಗಳ ಜೊತೆ ಮಾತುಕತೆಗೆ ಮುಂದಾಯ್ತು ಅಂತ ಶಾಂತಿ ಒಪ್ಪಂದಕ್ಕೆ ಅಮೆರಿಕ ನಿಯೋಜಿಸಿದ್ದ ಪ್ರತಿನಿಧಿ ಝಾಲ್ಮೈ ಖಲೀಲ್ಝಾದ್ ತಿಳಿಸಿದ್ದಾರೆ.
ಮತ್ತೊಂದ್ಕಡೆ ಇತ್ತೀಚೆಗಷ್ಟೇ ತಾಲಿಬಾನಿಗಳು ಪಾಕಿಸ್ತಾನದ ಗಡಿ ಭಾಗದಲ್ಲಿರೋ ಟೋರ್ಕಮ್ ನಗರದಲ್ಲಿ ಗಡಿ ಓಪನ್ ಮಾಡ್ತೀವಿ ಅಂತ ಘೋಷಿಸಿತ್ತು. ಅದ್ರ ಬೆನ್ನಲ್ಲೇ ಸಾವಿರಾರು ಮಂದಿ ಅಫ್ಘನ್ ಜನರು ಗಡಿ ಭಾಗಕ್ಕೆ ಬಂದಿದ್ದಾರೆ. ಗಡಿ ಓಪನ್ ಮಾಡ್ತಿದ್ದಂತೆ ಪಾಕಿಸ್ತಾನಕ್ಕೆ ಹೋಗಿಬಿಡೋಣ ಅಂತ ಹೀಗೆ ಜನ ಸೇರಿದ್ದಾರೆ. ಆದ್ರೆ ಪಾಕಿಸ್ತಾನ ಗಡಿಯಲ್ಲಿ ದೊಡ್ಡಮಟ್ಟದಲ್ಲಿ ಭದ್ರತೆ ಏರ್ಪಡಿಸಲಾಗಿದೆ.
-masthmagaa.com
Contact Us for Advertisement