ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕರು! ಯಾಕೆ?

masthmagaa.com:

ವಿಪಕ್ಷ ನಾಯಕರನ್ನ ಮಟ್ಟ ಹಾಕಲು ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳಲಾಗ್ತಿದೆ ಅಂತ ಆರೋಪಿಸಿ, 8 ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವ್ರಿಗೆ ಪತ್ರ ಬರೆದಿವೆ. ಆಪ್‌ ನಾಯಕ ಮನೀಷ್‌ ಸಿಸೋಡಿಯಾ ಅವ್ರನ್ನ ಸಿಬಿಐ ಬಂಧಿಸಿರುವ ಹಿನ್ನೆಲೆಯಲ್ಲಿ, ತನಿಖಾ ಸಂಸ್ಥೆಗಳನ್ನ ಮಿಸ್‌ಯೂಸ್‌ ಮಾಡಿಕೊಳ್ಳಲಾಗ್ತಿದೆ ಅಂತ ಆರೋಪಿಸಲಾಗಿದೆ. ಈ ಪತ್ರಕ್ಕೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ 8 ವಿರೋಧ ಪಕ್ಷದ ನಾಯಕರು ಸಹಿ ಹಾಕಿದ್ದಾರೆ. ಆದ್ರೆ ಕಾಂಗ್ರೆಸ್‌ ಸಹಿ ಹಾಕಿಲ್ಲ.

-masthmaaga.com

Contact Us for Advertisement

Leave a Reply