ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಾಜಿ ಸಿವಿಲ್‌ ಸರ್ವೆಂಟ್ಸ್‌!

masthmagaa.com:

ಮುಂಬರೋ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ದೇಶದ ರಾಜಕಾರಣದಲ್ಲಿ ಆಗ್ತಿರೋ ಬದಲಾವಣೆಗಳ ಬಗ್ಗೆ ಮಾಜಿ ಸಿವಿಲ್‌ ಸರ್ವೆಂಟ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಮಾಜಿ IAS, IPS, IFS ಮತ್ತು IFoSನಲ್ಲಿ ಸೇವೆ ಸಲ್ಲಿಸಿರೋ ಒಟ್ಟು 87 ನಿವೃತ್ತ ಸಿವಿಲ್‌ ಸರ್ವೆಂಟ್ಸ್‌ ಪತ್ರ ಬರೆದಿದ್ದಾರೆ. ಇದ್ರಲ್ಲಿ…ಎಲೆಕ್ಷನ್‌ ಹೊತ್ತಿಗೆ ಸರಿಯಾಗಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಬಂಧನ ಕುರಿತು ಪ್ರಶ್ನಿಸಲಾಗಿದೆ. ಜೊತೆಗೆ ಚುನಾವಣೆ ಹೊತ್ತಲ್ಲೆ ವಿಪಕ್ಷಗಳಿಗೆ ಕಿರುಕಳ ನೀಡಲಾಗ್ತಿದೆ ಅಂತ ಕಾಂಗ್ರೆಸ್‌ ಅಕೌಂಟ್‌ ಫ್ರೀಜ್‌ ಮಾಡಿರೋ ಬಗ್ಗೆ, TMC ಸಂಸದೆ ಮಹುವಾ ಮೊಯಿತ್ರಾ ನಿವಾಸದ ಮೇಲಿನ ದಾಳಿ ಬಗ್ಗೆ ಉತ್ತರ ಕೊಡಿ ಅಂತ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply