masthmagaa.com:
ಕಾಶ್ಮೀರದಲ್ಲಿ ಮತ್ತೆ ಹಿಂದೂ ಪಂಡಿತರು ಟಾರ್ಗೆಟ್ ಆಗಿದ್ದು ಮತ್ತೊಂದು ಭಯಾನಕ ಹತ್ಯೆ ನಡೆದಿದೆ. ಇಲ್ಲಿನ ಶೋಪಿಯಾನ್ನಲ್ಲಿ ಸೇಬಿನ ತೋಟದಲ್ಲಿದ್ದಾಗ ಇಬ್ಬರು ಸಹೋದರರ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಬ್ಬರು ಪ್ರಾಣ ಬಿಟ್ಟಿದ್ದು ಮತ್ತೊಬ್ಬರು ತೀವ್ರಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಮೃತ ವ್ಯಕ್ತಿಯನ್ನ 45 ವರ್ಷದ ಸುನೀಲ್ ಭಟ್ ಅಂತ ಗುರುತಿಸಲಾಗಿದೆ. ಭಯೋತ್ಪಾದಕರಿಗಾಗಿ ಶೋಧಕಾರ್ಯ ಆರಂಭವಾಗಿದೆ. ಅಂದ್ಹಾಗೆ ಈ ಮುಂಚೆ ಅಂದ್ರೆ ಕಳೆದ ಮೇ 12ನೇ ತಾರೀಖು ಇದೇ ಕಾಶ್ಮೀರದಲ್ಲಿ ಹಿಂದೂ ಉದ್ಯೋಗಿ ರಾಹುಲ್ ಭಟ್ ಅನ್ನೋರನ್ನ ಹತ್ಯೆ ಮಾಡಲಾಗಿತ್ತು.ಮೇ 31 ರಂದು ಜಮ್ಮುವಿನ ಸಾಂಬಾ ಜಿಲ್ಲೆಗೆ ಸೇರಿದ ಶಾಲಾ ಶಿಕ್ಷಕಿಯೊಬ್ಬರನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಕಾಶ್ಮೀರಿ ಪಂಡಿತರಲ್ಲಿ ಭಾರಿ ಆತಂಕ ಹಾಗೂ ಇದರ ವಿರುದ್ದ ಭಾರಿ ಪ್ರತಿಭಟನೆ ಕೂಡ ನಡೆದಿತ್ತು. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸದಿದ್ದರೆ ಕಣಿವೆಯಿಂದ ಸಾಮೂಹಿಕ ವಲಸೆ ಹೋಗೋದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನ ಕೂಡ ನೀಡಿದ್ರು.ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಜಮ್ಮುಕಾಶ್ಮೀರದ ಬಿಜೆಪಿ ಘಟಕದ ಮುಖ್ಯಸ್ಥ ರವೀಂದರ್ ರೈನಾ ʻಪಾಕಿಸ್ತಾನದ ಹೇಡಿಗಳು, ಅಲ್ಪಸಂಖ್ಯಾತ ಹಿಂದೂಗಳನ್ನ ಗುರಿಯಾಗಿಸಿದ್ದಾರೆ. ಕಾಶ್ಮೀರವನ್ನ ಸ್ಮಶಾನ ಮಾಡಬೇಕೆನ್ನುವ ಪಾಕಿಸ್ತಾನದ ಸಂಚಿಕೆ ನಾವು ಅವಕಾಶ ನೀಡೋದಿಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement