ಸಿಎಂ ನಿವಾಸಕ್ಕೆ ಕಲ್ಲೆಸೆತ: ವ್ಯಕ್ತಿಯಿಂದ ವಿಚಿತ್ರ ವರ್ತನೆ

masthmagaa.com:

ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ವ್ಯಕ್ತಿಯೋರ್ವ ಕಲ್ಲೆಸೆದಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಮೈಸೂರಿನ ಸತ್ಯಮೂರ್ತಿ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸತ್ಯಮೂರ್ತಿ ನೆನ್ನೆಯಷ್ಟೆ ಸಿಎಂ ಭೇಟಿ ನೀಡಲೆಂದು ಅವರ ನಿವಾಸಕ್ಕೆ ಬಂದಿದ್ದ. ಭೇಟಿ ನೀಡಲು ಬಂದವನು ಸಿಎಂ ನಿವಾಸದ ಬಳಿ ಸೆಲ್ಫಿ ವೀಡಿಯೋ ಮಾಡಿ ಕಲ್ಲು ಎಸೆದಿದ್ದಾನೆ. ಆರೋಪಿ ಈ ರೀತಿ ವಿಚಿತ್ರವೆನಿಸುವ ವರ್ತನೆಯನ್ನು ಈ ಹಿಂದೆಯೂ ಮಾಡಿದ್ದ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರವನ್ನು ಒಡೆದು ಹಾಕಿದ್ದ. ಆದ್ದರಿಂದ ಆರೋಪಿ ಸತ್ಯಮೂರ್ತಿ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿತ್ತು.

-masthmagaa.com

Contact Us for Advertisement

Leave a Reply