masthmagaa.com:
ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವ್ರು ಮತ ಚಲಾಯಿಸಿಲ್ಲ. ಇದಕ್ಕೆ ಕೇರಳದ LDF ಪಕ್ಷ ಟೀಕಿಸಿದೆ. ಈ ರೀತಿ ಮಾಡಿ ಚಂದ್ರಶೇಖರ್ ಅವ್ರು ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಅಂತೇಳಿದೆ. ಅಂದ್ಹಾಗೆ ಚಂದ್ರಶೇಖರ್ ಅವ್ರು, ʻನಾನು ಈ ಬಾರಿ ವೋಟ್ ಮಾಡೋಕೆ ಕರ್ನಾಟಕಕ್ಕೆ ಹೋಗಿಲ್ಲ. ಯಾಕಂದ್ರೆ… ನಾನು ಸ್ಪರ್ಧಿಸ್ತಿರೋ ತಿರುವನಂತಪುರಂ ಕ್ಷೇತ್ರ ನನ್ನ ಟಾಪ್ ಪ್ರಯಾರಿಟಿ. ಚುನಾವಣೆ ಸಮಯದಲ್ಲಿ ಇಲ್ಲಿರಬೇಕಾಗಿರೋದು ನನ್ನ ಕರ್ತವ್ಯʼ ಅಂದಿದ್ದಾರೆ.
-masthmagaa.com
Contact Us for Advertisement