masthmagaa.com:
ಭೂ ಹಗರಣ ಕೇಸ್ ಸಂಬಂಧ ಜೈಲಿನಲ್ಲಿರೋ ಜಾರ್ಖಂಡ್ನ ಮಾಜಿ ಸಿಎಂ ಹೇಮಂತ್ ಸೊರೆನ್, ತಮ್ಮ ಚಿಕ್ಕಪ್ಪ ರಾಜಾ ರಾಮ್ ಸೊರೆನ್ ಅವ್ರ ಅಂತ್ಯಕ್ರಿಯೆಗೆ ತೆರಳಲು 13 ದಿನಗಳ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ರು. ಆದ್ರೆ ಇದೀಗ ರಾಂಚಿ ಕೋರ್ಟ್ ಈ ಅರ್ಜಿಯನ್ನ ನಿರಾಕರಿಸಿದೆ. ಅಂದ್ಹಾಗೆ ಇದೇ ವರ್ಷ ಜನವರಿಯಲ್ಲಿ ಭೂ ಹಗರಣ ಕೇಸ್ ವಿಚಾರವಾಗಿ ಹೇಮಂತ್ರನ್ನ ಇಡಿ ಅಧಿಕಾರಿಗಳು ಬಂಧಿಸಿದ್ರು. ಸದ್ಯ ನ್ಯಾಯಾಂಗ ಬಂಧನದಲ್ಲಿರೊ ಅವ್ರಿಗೆ ಮಧ್ಯಂತರ ಜಾಮೀನನ್ನ ಕೂಡ ಕೋರ್ಟ್ ನಿರಾಕರಿಸಿದೆ.
-masthmagaa.com
Contact Us for Advertisement