ರಾಜ್ಯದ ಪ್ರಮುಖ ಶೈಕ್ಷಣಿಕ ಮೇಳ “ಪಬ್ಲಿಕ್‌ ಟಿವಿ ವಿದ್ಯಾಪೀಠ”ಕ್ಕೆ ಚಾಲನೆ!

masthmagaa.com:

ರಾಜ್ಯದ ಪ್ರಮುಖ ಶೈಕ್ಷಣಿಕ ಮೇಳ “ಪಬ್ಲಿಕ್‌ ಟಿವಿ ವಿದ್ಯಾಪೀಠ”ಕ್ಕೆ ಚಾಲನೆ ಸಿಕ್ಕಿದೆ. ಎರಡು ದಿನಗಳ ಕಾಲ ಅಂದ್ರೆ ಏಪ್ರಿಲ್‌ 28ರವರೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್.ಆರ್‌. ರಂಗನಾಥ್‌ ಚಾಲನೆ ನೀಡಿದ್ದಾರೆ. ಇನ್ನು ಮೊದಲ ದಿನ ಜಿಎಸ್ ಮತ್ತು ಎಸ್ ಬಿಜೆ ಗ್ರೂಪ್ ನ ಎಂಡಿ ಪ್ರಕಾಶ್‌ನಾಥ್‌ ಸ್ವಾಮೀಜಿ, ಗಾರ್ಡನ್ ಸಿಟಿ ಯುನಿವರ್ಸಿಟಿ ವಿಸಿ ಜೋಸೆಫ್, ರಾಮಯ್ಯ ಯುನಿವರ್ಸಿಟಿಯ ವಿಸಿ ಕುಲದೀಪ್ ರೈನಾ, ಕೇಂಬ್ರಿಡ್ಜ್ ಇನ್ಸ್‌ಸ್ಟಿಟ್ಯೂಷನ್‌ನ ಚೇರ್ಮನ್ ಡಿಕೆ ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ ಸಿಇಓ ರಾಜೀವ್ ಗೌಡ ಭಾಗಿಯಾಗಿದ್ರು. ಇನ್ನು ಪಿಯುಸಿ ನಂತ್ರ ಮುಂದೇನು? ಯಾವ ಯಾವ ಕಾಲೇಜಿನಲ್ಲಿ, ಯಾವ ವಿಭಾಗದಲ್ಲಿ ಶಿಕ್ಷಣ ಪಡೆದ್ರೆ ಬೆಸ್ಟ್‌ ಅನ್ನೊ ಹೀಗೆ ಹತ್ತಾರು ಪ್ರಶ್ನೆಗೆ ಇಲ್ಲಿ ಉತ್ತರ ಸಿಗಲಿದೆ. ಅಲ್ದೇ ಈ ಬಾರಿಯ ಎಜುಕೇಶನ್‌ ಎಕ್ಸ್‌ಪೋದಲ್ಲಿ 110ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply