ನಾನ್‌ ಜೈಲಿನಲ್ಲಿದ್ರೂ ದೆಹಲಿಯಲ್ಲಿ ನಾವೇ ಗೆಲ್ತೀವೆ: ಅರವಿಂದ ಕೇಜ್ರಿವಾಲ್‌!

masthmagaa.com:

2024ರ ಲೋಕಸಭೆ ಚುನಾವಣೆಯಲ್ಲಿ ನಾನು ಜೈಲಿನಲ್ಲಿದ್ರೂ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಗೆಲ್ಲುತ್ತೇ ಅಂತಾ ದೆಹಲಿಯ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ನಂಗೆ ಸಿಎಂ ಸ್ಥಾನದ ಬಗ್ಗೆ ಯಾವುದೇ ಲೋಭವಿಲ್ಲ, ನಾನು 15 ದಿನ ಜೈಲಿನಲಿದ್ರು ನಮಗೆ ಚುನಾವಣೆಯಲ್ಲಿ ಹಾನಿಯಾಗಲ್ಲ. ಸಿಎಂ ಅನ್ನೋ ಅಹಂ ನನ್ನಲ್ಲಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ದೆಹಲಿ ಲಿಕ್ಕರ್‌ ಕೇಸ್‌ಗೆ ಸಂಬಂಧಿಸಿದಂತೆ ಕೇಜ್ರಿವಾಲ್‌ರ ಬಂಧನವಾಗುವ ಸಾಧ್ಯತೆಯಿದೆ ಅನ್ನೊ ಮಾತುಗಳು ಕೇಳಿ ಬಂದಿದ್ವು. ಅಲ್ದೆ ಈ ಕೇಸ್‌ನ ವಿಚಾರಣೆಗೆ ಬರುವಂತೆ ಇಡಿ ಸಮನ್ಸ್‌ ಜಾರಿ ಮಾಡಿತ್ತು. ಆದ್ರೆ ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿರಲಿಲ್ಲ.

-masthmagaa.com

Contact Us for Advertisement

Leave a Reply