ನಟಿ ಉಷಾ ರವಿಶಂಕರ್‌ ಬಂಧನ !

masthmagaa.com:

ಸಿನಿಮಾ ಮತ್ತು ಕಿರುತೆರೆ ನಟಿ ಒಬ್ಬಳನ್ನ ಶಿವಮೊಗ್ಗ ಪೋಲಿಸ್‌ರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಸಿನಿಮಾ ಮತ್ತು ಕೆಲವು ಸೀರಿಯಲ್‌ಗಳನ್ನ ನಟಿಸಿದ್ದ ಉಷಾ ರವಿಶಂಕರ್‌ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

ಶುಕ್ರವಾರ ರಾತ್ರಿ ನಟಿ ಉಷಾ ರವಿಶಂಕರ್ ವಂಚನೆ ಪ್ರಕರಣದಲ್ಲಿ ನಟಿಗೆ ಶಿವಮೊಗ್ಗದ ಜೆಎಂಎಫ್ ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶೆ ಶೃತಿ ಅವರಿಂದ ಮದ್ಯಂತರ ಜಾಮೀನು ಮಂಜೂರಾಗಿತ್ತು. ಮಹಿಳೆ ಎನ್ನುವ ಕಾರಣದಿಂದ ನ್ಯಾಯಾಧೀಶೆ ಶೃತಿ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ರು ಇಂದು ಶನಿವಾರ (ಜೂನ್‌ 17) ರೆಗ್ಯುಲರ್ ಜಾಮೀನು ಪಡೆದುಕೊಳ್ಳಲು ನಟಿ ಪರ ನ್ಯಾಯವಾದಿಗೆ ಸೂಚನೆ ನೀಡಿದ್ದಾರೆ.

ಮೊದಲು ಫೇಸ್ ಬುಕ್ ನ ನೀನಾಸಂ ಫ್ರೆಂಡ್ ಸರ್ಕಲ್‌ನಲ್ಲಿ ಈ ಉಷಾ ರವಿಶಂಕರ್‌ ಮತ್ತು ಶರಣವನ್‌ ಪರಿಚಯ ಆಗತ್ತೆ. ಪರಿಚಯ ಸ್ನೇಹ ಆಗಿ ನಂತರ ಇಬ್ಬರ ನಂಬರ್‌ಗಳು ಎಕ್ಸಚೇಂಜ್‌ ಆಗತ್ತೆ. ನಂತ ತನ್ನನ್ನ ಮದುವೆ ಆಗು ಅಂತ ನಟಿ ಶರಣವನ್‌ ಹತ್ರ ಕೇಳ್ತಾಳೆ. ಶರಣವನ್‌ ಕೂಡ ಒಪ್ಪಿಕೋಳ್ತಾನೆ. ನಂತರ ನಟಿ ಶುರು ಮಾಡಿದ್ದು ದುಡ್ಡು ಕೊಡು ಅಂತ.

ಶರಣವನ್‌ ಸಹ ಕಲಾವಿದನಾಗಿದ್ದೂ ಸಣ್ಣ ಪುಟ್ಟ ಪಾತ್ರಗಳನ್ನ ಮಾಡಿಕೊಂಡು ಫ್ಯಾಕ್ಟರಿಗೆ ಕೆಲಸಕ್ಕೆ ಹೋಗ್ತಾ ಇರ್ತಾನೆ. ಉಷಾ ರವಿಶಂಕರ್‌ಗೆ ಬೇಕಾದಷ್ಟು ಹಣ ಕೋಡೋಕೆ ಶರಣವನ್‌ ಹತ್ರ ಸಾಧ್ಯ ಆಗ್ತಾ ಇರಲಿಲ್ಲ. ಶರಣವನ್‌ ಕ್ರೆಡಿಟ್‌ ಕಾರ್ಡ್‌ ಬಳಸಿಕೊಂಡು 4 ಲಕ್ಷ ರೂ. ಸಾಲ ತಗೋತಾರೆ ಉಷಾ ರವಿಶಂಕರ್‌. ಇಬ್ಬರೂ ಭೇಟಿ ಆದಾಗಲೆಲ್ಲಾ ನಟಿ ದುಡ್ಡು ಕೊಡು ಅಂತ ಪೀಡಿಸ್ತಾ ಇರ್ತಾಳೆ. 7 ರಿಂದ 8 ಲಕ್ಷ ಹಣವನ್ನ ಕ್ರೆಡಿಟ್‌ ಕಾರ್ಡ್‌ ಮೂಲಕ ತಗೊಂಡಿರೋದಾಗಿ ಶರಣವನ್‌ ಆರೋಪ ಮಾಡಿದ್ದಾರೆ.

ಮದುವೆ ಆಗ್ತೀನಿ ಅಂತ ಹೇಳಿ ನಂಬಿಸಿ ಶರವಣನ್ ಗೆ ನಟಿ ಮೋಸ ಮಾಡಿದ್ದಾಳೆ. 2022 ರಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಶರವಣನ್ ನಗರದ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ದೂರು ದಾಖಲಾಗಲಿಲ್ಲ. ನಂತರ ವಕೀಲ ವಿಶ್ವ ಟಿ ಎಂಬುವರ ಮೂಲಕ ಶಿವಮೊಗ್ಗ ಕೋರ್ಟ್ ನಲ್ಲಿ ಖಾಸಗಿ ದೂರು ಸಲ್ಲಿಸಿರುತ್ತಾರೆ. ಖಾಸಗಿ ದೂರಿನ ಮೂಲಕ ದೂರು ದಾಖಲಾದರೂ ಸಹ ಕಲಾವಿದೆಯ ಅಡ್ರೆಸ್ ಸಮಸ್ಯೆ ಎದುರಾಗಿತ್ತು.

ನಂತರ ವಾಟ್ಸಪ್ ಮೂಲಕವೇ ನಟಿಗೆ ನೋಟಿಸ್ ನೀಡಲಾಯಿತು. ಕೋರ್ಟ್ ನೋಟಿಸ್ ಜಾರಿ ಆದಾಗ ವಕೀಲರ ಮೂಲಕ ಹಾಜರಾಗಬೇಕಿದ್ದ ಸಹಕಲಾವಿದೆ ಆರಂಭದಲ್ಲಿ ವಕೀಲರ ಮೂಲಕ ನ್ಯಾಯಾಲದಲ್ಲಿ ಫೈಟ್ ಮಾಡಿದರೂ ಸಹ ಎರಡನೇ ಬಾರಿಯಾದರೂ ನ್ಯಾಯಾಲಕ್ಕೆ ಹಾಜರಾಗಿ ಜಾಮೀನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇಲ್ಲೆಲ್ಲಾ ಎಡವಿದ ಸಹಕಲಾವಿದೆಗೆ ನಿರೀಕ್ಷಣ ಜಾಮೀನು ಸಹ ಮಂಜೂರಾಗಿತ್ತು. ನಿರೀಕ್ಷಣ ಜಾಮೀನು ದೊರೆತರೂ ಒಂದು ತಿಂಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿತ್ತು. ಆದರೆ ಈ ನಟಿ ಹಾಜರಾಗಲಿಲ್ಲ. ಸಮನ್ಸ್ ಮೇಲೆ ಬರಲಿಲ್ಲ ಎಂದು ನಿನ್ನೆ ಶುಕ್ರವಾರ ವಿನೋಬ ನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರಿ ಪಡಿಸಿದ್ದಾರೆ.

417, 418, 419, 420 ನಾಲ್ಕು ಸೆಕ್ಷನ್ ಹಾಕಲಾಗಿದೆ. ಎಫ್ ಐಆರ್ ಗೆ ಠಾಣೆಗೆ ರೆಫರ್ ಮಾಡಲು ನ್ಯಾಯಾಲಯ ಶರವಣನ್ ವಕೀಲರಿಗೆ ಕೇಳಿತ್ತು. ಆದರೆ ಕಕ್ಷಿದಾರರಿಗೆ ಮುಂದಿನ ಪ್ರೋಸೆಸ್ ನಲ್ಲಿ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಕೋರ್ಟ್ ಗೆ ವಿಚಾರಣೆ ನಡೆಸುವಂತೆ ವಕೀಲರು ಕೋರಿದ್ದರಿಂದ ನ್ಯಾಯಾಲಯ ವಿನೋಬ ನಗರ ಪೊಲೀಸ್ ಠಾಣೆಯ ಮೂಲಕ ಆಕೆಯನ್ನ ಬಂಧಿಸಲು ಸೂಚಿಸಿತ್ತು.

ನ್ಯಾಯಾಲಯದ ಆದೇಶದಂತೆ ನಟಿಯ ಬಂಧನವಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೆ ಆಕೆಯ ವಿರುದ್ಧ ಕ್ರಿಮಿನಲ್ ಕೇಸ್ ಸಹ ಶರವಣನ್ ಹಾಕಿದ್ದರು. ನಟಿ ಉಷಾ ರವಿಶಂಕರ್. ಸಲಗ ಮತ್ತು ಒಂದಲ್ಲ ಎರಡು ಎಂಬ ಸಿನಿಮಗಳಲ್ಲಿ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದರು. ಈಗ ತಾನೇ ದೊಡ್ಡ ಮತ್ತು ಕಿರು ಪರದೆಯಲ್ಲಿ ಕಾಲಿಟ್ಟು ಗುರುತಿಸಿಕೊಂಡಿದ್ದ ಉಷಾ ಈಗ ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ.

-masthmagaa.com

Contact Us for Advertisement

Leave a Reply