masthmagaa.com:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗ್ತಿರುವ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ದೇಶದ ಮೂಲೆ ಮೂಲೆಗಳಿಂದ ಜನರು ಆಗಮಿಸುವ ನಿರೀಕ್ಷೆ ಇದೆ. ಆದ್ರೆ ಉದ್ಘಾಟನೆ ಬಳಿಕ ಇವರೆಲ್ಲರೂ ಹಿಂತಿರುಗುವ ಸಮಯದಲ್ಲಿ ಗೋದ್ರಾ ರೀತಿಯ ಘಟನೆ ಸಂಭವಿಸಬಹುದು ಅಂತ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಅಧಿಕಾರದ ದುರಾಸೆಗಾಗಿ ಉದ್ಧವ್ ಅವ್ರು ಅದೇನು ಯೋಚಿಸುತ್ತಿದ್ದಾರೋ, ಏನು ಮಾಡ್ತಿದ್ದಾರೋ ನನಗೆ ತಿಳಿದಿಲ್ಲ. ಆದ್ರೆ ಕೆಲವರು ಪವರ್ನ ದುರಾಸೆಗೋಸ್ಕರ ತಮ್ಮ ಸಿದ್ಧಾಂತಗಳನ್ನೇ ಮರೆತಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ.
-masthmagaa.com
Contact Us for Advertisement