masthmagaa.com:
ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆದಾಗಿಂದ ಸಿಕ್ಕಾಪಟ್ಟೆ ಸಮಸ್ಯೆಲಿ ಇದೆ, ನಂತರ ಸಿನಿಮಾ ರಿಲೀಸ್ ಆದಾಗ್ಲೂ ಸಹ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿರಲಿಲ್ಲ. ಸದ್ಯದ ಪರಿಸ್ಥಿತಿ ಪ್ರಕಾರ ಆದಿಪುರಷ್ ಸಿನಿಮಾದ ಮೇಲೆ FIR ಬೀಳೊ ಸಾಧ್ಯತೆ ಇದೆ.
ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ ( AICWA ) ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ಈ ಪತ್ರದಲ್ಲಿ ಆದಿಪುರುಷ ನಿರ್ದೇಶಕ ಓಂ ರಾವುತ್, ಬರಹಗಾರ ಮನೋಜ್ ಮುಂತಾಶಿರ್ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ FIR ದಾಖಲಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. “ಈ ಪತ್ರವು 16 ಜೂನ್ 2023 ರಂದು ಭಾರತದಾದ್ಯಂತ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಆದಿಪುರುಷ್ ಎಂಬ ಚಲನಚಿತ್ರದತ್ತ ನಿಮ್ಮ ಗಮನವನ್ನು ಸೆಳೆಯಲು ಬರೆಯಲಾಗಿದೆ. ಈ ಸಿನಿಮಾ ಹಿಂದೂ ಧರ್ಮ ಮತ್ತು ಜನರ ನಂಬಿಕೆಗೆ ಧಕ್ಕೆ ತರುವಂತ ಸಿನಿಮಾ. ಅಲ್ಲದೇ ರಾಮ, ಸೀತಾ, ಹನುಮಂತನನ್ನ ದೇವರು ಅಂತ ನಂಬುವ ನಮ್ಮ ಜನರಿಗೂ ಕೂಡ ಇದು ಸಹಿಸೋಕೆ ಸಾಧ್ಯ ಇಲ್ಲ. ಅಲ್ಲದೇ ಈಗ ನಿರ್ಮಾಪಕರು ದುಡ್ಡು ಮಾಡುವ ಸಲುವಾಗಿ ಚಿತ್ರವನ್ನ ಕಡಿಮೆ ರೇಟ್ಗೆ ತೋರಿಸ್ತಾ ಇದಾರೆ. ಈ ಸಿನಿಮಾ ನಮ್ಮ ಸಮಾಜಕ್ಕೆ ತಪ್ಪುಸ ಸಂದೇಶವನ್ನ ಕೋಡ್ತಾ ಇದೆ. ನಮ್ಮ ನಂಬಿಕೆಯನ್ನ ರಾಮಾಯಣ ಎಂಬ ಸಿನಿಮಾ ಮಾಡಿದ ಮೇಕರ್ಸ್ ಟಿ-ಸೀರೀಸ್ ಮತ್ತು ನಿರ್ಮಾಪಕರು, ಬರಹಗಾರ ಮನೋಜ್ ಮುಂತಸಿರ್ ಮತ್ತು ನಿರ್ದೇಶಕ ಓಂ ರಾವುತ್ ಅವರು ಸಂಭಾಷಣೆ, ವೇಷ ಭೂಷಣಗಳನ್ನ ಅವರಿಗೆ ಬೇಕಾದ ಹಾಗೇ ಮಾಡಿ ಅಪಹಾಸ್ಯ ಮಾಡಿದ್ದಾರೆ. ಆದಿಪುರುಷ ಚಿತ್ರದ ನಿರ್ದೇಶಕ ಮೇಕರ್ಸ್, ನಿರ್ಮಾಪಕರಾದ ಭೂಷಣ್ ಕುಮಾರ್ ಟಿ-ಸೀರೀಸ್ ಮತ್ತು ಇತರರು, ನಿರ್ದೇಶಕ ಓಂ ರಾವುತ್ ಮತ್ತು ಬರಹಗಾರ ಮನೋಜ್ ಮುಂತಸಿರ್ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಲು ನಾವು ನಿಮ್ಮನ್ನು ವಿನಂತಿಸುತ್ತಿದ್ದೇವೆ” ಅಂತ ಪತ್ರದಲ್ಲಿ ಬರೆದಿದ್ದಾರೆ.
-masthmagaa.com
Contact Us for Advertisement