masthmagaa.com:
ಭಾರತೀಯ ವಾಯು ಸೇನೆ ತ್ವರಿತವಾಗಿ ಡೊರ್ನಿಯನ್ ಏರ್ಕ್ರಾಫ್ಟ್ ನಿಯೋಜಿಸಿ ಯೋಧನೊಬ್ಬನ ಪ್ರಾಣ ಉಳಿಸಿ ತನ್ನ ಕಾರ್ಯ ಕ್ಷಮತೆ ಮೆರೆದಿದೆ. ಪುಣೆಯಿಂದ ದಿಲ್ಲಿಗೆ ಯೋಧನ ಜೀವ ಉಳಿಸಲು ಲಿವರ್ ಸಾಗಿಸಬೇಕಾಗಿತ್ತು. ಈ ವಿಚಾರವಾಗಿ ಆರ್ಮಿ ವೈದ್ಯರು ವಾಯು ಸೇನೆಗೆ ತಕ್ಷಣವೇ ಏರ್ಕ್ರಾಫ್ಟ್ ನಿಯೋಜನೆಗಾಗಿ ಶಾರ್ಟ್ ನೋಟಿಸ್ ನೀಡಿದ್ರು. ಇದಕ್ಕೆ ಕೆಲ ಹೊತ್ತಲ್ಲೆ ಪ್ರತಿಕ್ರಿಯಿಸಿದ ವಾಯು ಸೇನೆ ಡೊರ್ನಿಯನ್ ವಿಮಾನದ ಮೂಲಕ ಲಿವರ್ನ್ನ ಕೆಲ ಹೊತ್ತಲ್ಲೆ ದಿಲ್ಲಿಗೆ ಸಾಗಿಸಿ ಆ ಯೋಧನ ಪ್ರಾಣ ಉಳಿಸಿದೆ. ಈ ಬಗ್ಗೆ ಸ್ವತಃ ವಾಯುಸೇನೆ ಮಾಹಿತಿ ನೀಡಿದೆ.
-masthmagaa.com
Contact Us for Advertisement