masthmagaa.com:
ಪೌರತ್ವ ತಿದ್ದುಪಡಿ (CAA) ಕಾನೂನನ್ನ ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಬಂಗಾಳ, ತಮಿಳುನಾಡು ಹಾಗೂ ಕೇರಳ ಸರ್ಕಾರಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೆ ಶಾ ಎದುರಾಳಿಗಳಿಗೆ ಈ ಹೇಳಿಕೆ ಮೂಲಕ ಟಾಂಗ್ ಕೊಟ್ಟಿದ್ದಾರೆ. ಅಲ್ದೇ ಯಾವ ರಾಜ್ಯಗಳು ಕೂಡ ಈ ಕಾನೂನನ್ನ ನಿರ್ಬಂಧಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರೂ ಸೇರಿದಂತೆ ಇತರರು ಈ CAA ಕಾನೂನಿನಿಂದ ಭಯ ಪಡೋ ಅಗತ್ಯ ಇಲ್ಲ. ಹೀಗಾಗಿ ಈ ಕಾನೂನು ಕೇವಲ ನಿರ್ದಿಷ್ಟ ಸಮುದಾಯಗಳ ಧಾರ್ಮಿಕ ನಿರಾಶ್ರಿತರಿಗೆ ಪೌರತ್ವ ನೀಡೊ ಗುರಿ ಹೊಂದಿದೆ ಅಷ್ಟೇ ಅಂತ ಶಾ ತಿಳಿಸಿದ್ದಾರೆ.
-masthmagaa.com
Contact Us for Advertisement