ಜಾಗತಿಕ ಶಾಂತಿಗಾಗಿ ಭಾರತ ಪ್ರಮುಖ ಪಾತ್ರ ವಹಿಸಬೇಕು: ಸೌದಿ ಅರೇಬಿಯಾ

masthmagaa.com:

ವಿಶ್ವ ಪ್ಯಾಲೆಸ್ತೀನ್‌ರ ದಿನದ ಅಂಗವಾಗಿ ಅರಬ್‌ ರಾಷ್ಟ್ರಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರು ದೆಹಲಿಯಲ್ಲಿ ಮೀಟಿಂಗ್‌ ನಡೆಸಿದ್ದಾರೆ. ಈ ವೇಳೆ ಜಾಗತಿಕ ಶಾಂತಿಗಾಗಿ ಭಾರತ ಪ್ರಮುಖ ಪಾತ್ರವನ್ನ ವಹಿಸೋ ಬಗ್ಗೆ ಭಾರತದಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಸಲೇಹ್‌ ಈದ್‌ ಅಲ್‌ ಹುಸ್ಸೇನಿ ಮಾತಾಡಿದ್ದಾರೆ. ʻಭಾರತ ಬಹಳ ಇಂಪಾರ್ಟೆಂಟ್‌ ದೇಶ. ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ ಪ್ರಮುಖ ಪಾತ್ರ ವಹಿಸಬೇಕು. ಭಾರತ ಹಿಂದಿನಿಂದಲೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಸಪೋರ್ಟ್‌ ಮಾಡ್ತಾ ಬಂದಿದೆ. ಈಗಲೂ ಕೂಡ ಅದೇ ರೀತಿ ಬೆಂಬಲ ನೀಡೋದನ್ನ ಕಂಟಿನ್ಯೂ ಮಾಡ್ಬೇಕುʼ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಮೀಟಿಂಗ್‌ನ್ನ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸೋದಕ್ಕೆ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply