masthmagaa.com:
ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾರನ್ನ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಸಿಸೋಡಿಯಾ ಅವರ ಲ್ಯಾಪ್ಟಾಪ್ಗಳನ್ನ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕ ಅವರನ್ನ ಕೋರ್ಟಿಗೆ ಪ್ರೊಡ್ಯೂಸ್ ಮಾಡಲಾಗಿತ್ತು. ಅಲ್ಲಿ ನ್ಯಾಯಾಲಯ ಸಿಸೋಡಿಯಾಗೆ ಮಾರ್ಚ್ 4ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಇತ್ತ ಸಿಸೋಡಿಯಾ ಬಂಧನಕ್ಕೆ ದೆಹಲಿ, ಚಂಡೀಗಢ ಸೇರಿ ಅನೇಕ ಕಡೆ AAP ತೀವ್ರ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ನಿರತ ಅನೇಕ ನಾಯಕರನ್ನ ಸಹ ಬಂಧಿಸಿ ಬಿಡುಗಡೆ ಮಾಡಲಾಗಿದೆ. ಇತ್ತ ಸಿಸೋಡಿಯಾ ಬಂಧನಕ್ಕೆ ಸಿಡಿದು ಬಿದ್ದಿರೋ ಆಪ್ ನಾಯಕ ಸಂಜಯ್ ಸಿಂಗ್ ಇದು ಸರ್ವಾಧಿಕಾರತ್ವದ ಪರಮಾವಧಿ. ಮೋದಿಯವರೇ ದೇವರು ನಿಮ್ಮನ್ನ ಕ್ಷಮಿಸೋದಿಲ್ಲ ಅಂತ ಹೇಳಿದ್ದಾರೆ. ಇತ್ತ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಸಿಬಿಐ ಅಧಿಕಾರಿಗಳಿಗೆ ಸಿಸೋಡಿಯಾರನ್ನ ಬಂಧಿಸೋಕೆ ಇಷ್ಟ ಇರಲಿಲ್ಲ. ಯಾಕಂದ್ರೆ ಅವರತ್ರ ಯಾವುದೇ ಪುರಾವೆಗಳೇ ಇಲ್ಲ. ಆದ್ರೆ ತನಿಖಾ ಸಂಸ್ಥೆಗಳು ರಾಜಕೀಯ ಒತ್ತಡವನ್ನ ಅನುಭವಿಸ್ತಿವೆ ಅಂತ ಹೇಳಿದ್ದಾರೆ. ಅಂದ್ರೆ ಬಿಜೆಪಿಯ ಒತ್ತಾಯಕ್ಕೆ ತನಿಖಾ ಸಂಸ್ಥೆಗಳು ಈ ರೀತಿ ರೇಡ್ ಮಾಡ್ತಿವೆ ಅಂತ.
-masthmagaa.com
Contact Us for Advertisement