masthmagaa.com:
ಯಾವಾಗಲೂ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗೋ ಯೋಗ ಗುರು ಬಾಬಾ ರಾಮ್ದೇವ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಯೋಗ ಗುರು, ಒಬ್ಬ ಮುಸಲ್ಮಾನ ಭಯೋತ್ಪಾದಕನಾಗಿದ್ರೂ ಖಂಡಿತ ನಮಾಜ್ ಮಾಡ್ತಾನೆ ಅಂತ ಹೇಳಿದ್ದಾರೆ. ಜೊತೆಗೆ ನಮಾಜ್ನ್ನ ಐದು ಬಾರಿ ಮಾಡಿ ಮತ್ತು ನೀವು ಯಾವ ಪಾಪವನ್ನ ಮಾಡ್ಬೇಕು ಅನ್ಕೊತಿರೋ ಅದನ್ನ ಮಾಡಿ ಅಂತ ವ್ಯಂಗ್ಯ ಮಾಡಿದ್ದಾರೆ. ಅಷ್ಟೆ ಅಲ್ದೆ ಮುಸ್ಲಿಂರನ್ನ ಗುರಿಯಾಗಿಸಿಕೊಂಡು ನೀವು ಹಿಂದೂಗಳ ಹುಡುಗಿಯರನ್ನ ಅಪಹರಿಸಿಕೊಂಡು ಹೋಗ್ತೀರಿ ಅಥ್ವಾ ಜಿಹಾದ್ ಹೆಸ್ರಲ್ಲಿ ಭಯೋತ್ಪಾದಕರಾಗ್ತೀರಿ. ನಿಮ್ಮ ಮನಸ್ಸಿಗೆ ಬಂದದ್ದನ್ನ ಮಾಡ್ತೀರಿ ಆದ್ರೆ ಹಿಂದೂ ಧರ್ಮದಲ್ಲಿ ಹಾಗಿಲ್ಲ ಅಂತ ಹೇಳಿಕೆ ನೀಡಿದ್ದಾರೆ. ಇನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದಂತೆ, ಚರ್ಚ್ಗೆ ಹೋಗಿ ಮೇಣದಬತ್ತಿಯನ್ನ ಬೆಳಗಿಸಿ ಯೇಸುಕ್ರಿಸ್ತನ ಮುಂದೆ ನಿಂತ್ರೆ ಎಲ್ಲಾ ಪಾಪಗಳು ನಾಶವಾಗ್ತವೆ ಅಂತ ಹೇಳಿದ್ದಾರೆ. ಇದೇ ವೇಳೆ ನಾವು ಸದ್ಗುಣವನ್ನ ಹೊಂದಿರ್ಬೇಕು. ನಮ್ಮ ನಡವಳಿಕೆಯೂ ಹೀಗಿರಬೇಕು. ಜನರು ಹಿಂಸಾಚಾರ ಮತ್ತು ಸುಳ್ಳುಗಳಿಂದ ದೂರವಿರಬೇಕು. ವ್ಯಕ್ತಿಯು ಜಗಳ, ಪಾಪ ಮತ್ತು ಅಪರಾಧದಿಂದ ದೂರವಿರಬೇಕು ಅಂತ ಹಿಂದೂ ಧರ್ಮ ಬೋಧಿಸುತ್ತದೆ ಅಂತ ರಾಮ್ದೇವ್ ಹೇಳಿದ್ದಾರೆ.
-masthmagaa.com
Contact Us for Advertisement