ಕೇಜ್ರಿವಾಲ್‌, ಕಾಂಗ್ರೆಸ್‌ ವಿಚಾರಕ್ಕೆ ಕಮೆಂಟ್‌ ಮಾಡಿದ ವಿಶ್ವಸಂಸ್ಥೆ!

masthmagaa.com:

ಕೇಜ್ರಿವಾಲ್‌ ಬಂಧನ ವಿಚಾರ ಈಗ ವಿಶ್ವ ಮಟ್ಟದಲ್ಲಿ ಸುದ್ದಿಯಾಗ್ತಿದ್ದು ಈಗ ಖುದ್ದು ವಿಶ್ವಸಂಸ್ಥೆ ಕೂಡ ಈ ಬಗ್ಗೆ ರಿಯಾಕ್ಟ್‌ ಮಾಡಿದೆ. ವಿಶ್ವಸಂಸ್ಥೆ ಅಧಿಕಾರಿ ಸ್ಟೀಫನ್‌ ಡುಜಾರಿಕ್ ಈ ಬಗ್ಗೆ ಮಾತನಾಡಿ, ಭಾರತ ಸೇರಿದಂತೆ ಎಲ್ಲಾ ದೇಶಗಳ ಚುನಾವಣೆಯಲ್ಲಿ, ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ರಕ್ಷಣೆಯಾಗೊ ಬಗ್ಗೆ ವಿಶ್ವಾಸ ನಮಗಿದೆ ಅಂತೇಳಿದ್ದಾರೆ. ಅಲ್ದೇ ಎಲ್ಲ ದೇಶಗಳ ಚುನಾವಣೆಯಲ್ಲೂ ಅಲ್ಲಿನ ಜನ ನಿರ್ಭಯವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಮತವನ್ನ ಚಲಾಯಿಸಬೇಕು ಅಂತ ಹೇಳಿದ್ದಾರೆ. ಈ ಮೂಲಕ ಕೇಜ್ರಿವಾಲ್‌ ವಿಚಾರದಲ್ಲಿ ಅಮೆರಿಕ, ಜರ್ಮನಿ ಬಳಿಕ ಈಗ ವಿಶ್ವಸಂಸ್ಥೆ ಕೂಡ ಮೂಗು ತೂರಿಸಿದಂತೆ ಆಗಿದೆ. ಕೇಜ್ರಿವಾಲ್‌ ಅರೆಸ್ಟ್‌ ಆಗಿರೋದು ಹಾಗೂ ಕಾಂಗ್ರೆಸ್‌ ಅಕೌಂಟ್‌ಗಳು ಫ್ರೀಜ್‌ ಆಗಿರೋದ್ರ ಬಗ್ಗೆ ಪ್ರಶ್ನೆ ಕೇಳಿದಾಗ, ಡುಜಾರಿಕ್‌ ಈ ರೀತಿ ಉತ್ತರ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply