ಆಸ್ಪತ್ರೆಯಲ್ಲಿ ಅದೆಂಥಾ ಅವ್ಯವಸ್ಥೆ? ಜೀರಳೆಗಳದ್ದೇ ದರ್ಬಾರ್!

masthmagaa.com:

ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಅತಿಯಾದ ಜೀರಳೆಗಳಿಂದಾಗಿ ಭಾರಿ ಅವ್ಯವಸ್ಥೆ ಕಂಡುಬಂದಿದ್ದು, ಮಕ್ಕಳು, ಬಾಣಂತಿಯರಿಗೆ ಆತಂಕ ಎದುರಾಗಿದೆ. ಎರಡು ದಿನದ ಹಸುಗೂಸಿನ ದೇಹ ಪೂರ್ತಿ ಜಿರಳೆಗಳು ಕಚ್ಚಿವೆ. ಆದರೆ ಆಸ್ಪತ್ರೆ ಅಧೀಕ್ಷಕಿ ಸವಿತಾ ಅದು ಬಟ್ಟೆಯಿಂದ ರ‍್ಯಾಷಸ್ ಆಗಿದೆ ಅಂತ ಹೇಳಿದ್ದಾರೆ. ಈ ಘಟನೆ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗೂಂಡುರಾವ್‌ ರಿಯಾಕ್ಟ್‌ ಮಾಡಿದ್ದು, ವಾಣಿ ವಿಲಾಸ ಆಸ್ಪತ್ರೆ ವೈದ್ಯಕೀಯ ಇಲಾಖೆ ಅಧೀನಕ್ಕೆ ಬರುತ್ತದೆ. ಹೀಗಾಗಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಕ್ರಮ ಕೈಗೊಳ್ಳುತ್ತಾರೆ, ಇದರ ಬಗ್ಗೆ ನಾನ್‌ ಅವ್ರ ಜೊತೆ ಮಾತಾಡ್ತೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply