ಬೆಳಗಾವಿ ಗಡಿ ವಿಚಾರ: ಮಹಾರಾಷ್ಟ್ರ ಸರ್ಕಾರದ ಮಹತ್ವದ ಮೀಟಿಂಗ್!

masthmagaa.com:

ಇಂದು ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ವಿಚಾರವಾಗಿ ಮಹಾರಾಷ್ಟ್ರದ ವಿಧಾನಸೌಧದಲ್ಲಿ ಮಹತ್ವದ ಮೀಟಿಂಗ್‌ ನಡೆಸಿದೆ ಅಂತ ವರದಿಯಾಗಿದೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್‌ ದೇಸಾಯಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬೆಳಗಾವಿ ಗಡಿಯಲ್ಲಿ ಪುಂಡಾಟ ಮೆರೆಯೊ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಹಾಜರಿದ್ರು ಅಂತ ಹೇಳಲಾಗ್ತಿದೆ. ಅಲ್ದೇ ಬೆಳಗಾವಿ ಗಡಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ನಿಯೋಜಿಸಿರೋ ವಕೀಲರ ತಂಡದ ಜೊತೆಗೂ ಮಹಾರಾಷ್ಟ್ರ ಸರ್ಕಾರ ಮಾತುಕತೆ ನಡೆಸಲಿದೆ ಅಂತೇಳಲಾಗ್ತಿದೆ. ಇನ್ನು ಸಭೆಯಲ್ಲಿ ಗಡಿ ವಿವಾದ ಸಂಬಂಧ ಸಂಗ್ರಹಿಸಬೇಕಾದ ಸಾಕ್ಷ್ಯಾಧಾರ ದಾಖಲೆ ಸಂಬಂಧ ಚರ್ಚೆ ನಡೆಯಲಿದೆ ಅಂತ ವರದಿಯಾಗಿದೆ. ಬೆಳಗಾವಿ ಗಡಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಯಾವಾಗ ಬೇಕಾದ್ರೂ ವಿಚಾರಣೆಗೆ ಬರಬ್ಹುದು ಹೀಗಾಗಿ ಮಹಾರಾಷ್ಟ್ರ ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದೆ ಅಂತ ವರದಿಯಾಗಿದೆ. ಅತ್ತ ಮಹಾರಾಷ್ಟ್ರದಲ್ಲಿ ಇಷ್ಟೆಲ್ಲ ಬೆಳವಣಿಗೆಯಾಗ್ತಿದ್ರೂ, ಇತ್ತ ಕರ್ನಾಟಕ ಸರ್ಕಾರ ಮಾತ್ರ ಈ ವಿಷಯದಲ್ಲಿ ಮೌನವಾಗಿದೆ.

-masthmagaa.com

Contact Us for Advertisement

Leave a Reply