“ರಾಮನ ಮೇಲಿದ್ದ ನಂಬಿಕೆ ಆ ಮಗುವಿನ ಜೀವ ಉಳಿಸಿತ್ತು” : ಸತ್ಯ ಬಿಚ್ಚಿಟ್ಟ ನಟ ಅರುಣ್‌ ಗೋವಿಲ್‌ !

masthmagaa.com:

ರಮಾನಂದ್‌ ಸಾಗರ್‌ ಅವರ ರಾಮಾಯಣ ಸೀರಿಯಲ್‌ನಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್‌ ಗೋವಿಲ್‌ ಆದಿಪುರುಷ್‌ ಸಿನಿಮಾದ ಬಗ್ಗೆ ಒಂದು ಹೇಳಿಕೆಯನ್ನ ಕೊಟ್ಟು ತಮಗಾದ ಒಂದು ಅನುಭವವನ್ನ ಹಂಚಿಕೊಂಡಿದ್ದಾರೆ.

ಜೀ ನ್ಯೂಸ್‌ನ ಸಂದರ್ಶನದಲ್ಲಿ ಮಾತನಾಡಿದ ಅರುಣ್‌ ಗೋವಿಲ್‌ ” ‘ರಾಮಾಯಣ ಸೀರಿಯಲ್​ ಶೂಟಿಂಗ್​ ವೇಳೆ ನಾನು ಮೇಕಪ್​ ಹಾಕಿಕೊಂಡು ಕುಳಿತಿದ್ದೆ. ಟಿ-ಶರ್ಟ್​ ಮತ್ತು ಶಾರ್ಟ್ಸ್​ ಧರಿಸಿದ್ದೆ. ಆಗ ಓರ್ವ ಮಹಿಳೆ ತನ್ನ ಮಗುವನ್ನು ಕರೆದುಕೊಂಡು ಬಂದಳು. ಆಕೆ ಅಳುತ್ತಿದ್ದಳು. ಮಗುವನ್ನು ನನ್ನ ಕಾಲಿನ ಮೇಲೆ ಹಾಕಿ, ದಯವಿಟ್ಟು ಅದರ ಜೀವ ಉಳಿಸುವಂತೆ ಬೇಡಿಕೊಂಡಳು. ಮೊದಲು ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಕೆಗೆ ಹೇಳಿದೆ. ಅಂದು ನಾನು ಕೂಡ ಆ ಮಗುವಿಗಾಗಿ ಪ್ರಾರ್ಥಿಸಿದೆ. ನನ್ನ ಕೈಯನ್ನು ತೆಗೆದುಕೊಂಡು ಮಗುವಿನ ತಲೆಯ ಮೇಲೆ ಆಕೆ ಇರಿಸಿದಳು. ಮೂರು ದಿನಗಳ ಬಳಿಕ ಆಕೆ ಮತ್ತೆ ಬಂದಳು. ಮಗ ಗುಣಮುಖನಾಗಿ ಆಕೆಯ ಪಕ್ಕದಲ್ಲಿ ನಡೆದುಕೊಂಡು ಬಂದ. ಇದರಲ್ಲಿ ನನ್ನ ಪಾಲು ಏನೂ ಇಲ್ಲ. ಅದೆಲ್ಲವೂ ಆಗಿದ್ದು ಆಕೆ ರಾಮನಲ್ಲಿ ಇಟ್ಟಿದ್ದ ನಂಬಿಕೆಯಿಂದ. ಇದು ನಮ್ಮ ನಂಬಿಕೆ, ಭಕ್ತಿ. ಧರ್ಮದ ಬಗ್ಗೆ ಸಿನಿಮಾ ಮಾಡಿದಾಗ ದೇವರ ಬಗ್ಗೆ ಚಿತ್ರತಂಡದರಿಗೆ ಇಷ್ಟೇ ನಂಬಿಕೆ ಇರಬೇಕು’ ಎಂದು ಅರುಣ್​ ಗೋವಿಲ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply