ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದ ಸಂವಿಧಾನ ಜಾಗೃತಿ ಅಭಿಯಾನ!

masthmagaa.com:

ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರದ ʻಸಂವಿಧಾನ ಜಾಗೃತಿ ಅಭಿಯಾನʼ ಫೆಬ್ರುವರಿ 26 ರಂದು ಬೆಂಗಳೂರು ಪ್ಯಾಲೇಸ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಅಭಿಯಾನದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗೋ ಸಾಧ್ಯತೆಯಿದೆ ಅಂತೇಳಾಗ್ತಿದೆ. ಜೊತೆಗೆ ಕೆಲ ಪ್ರಮುಖರು ಕೂಡ ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಭಿಯಾನ ಹಿನ್ನಲೆ ಬೆಂಗಳೂರಿನ ಸೆಂಟ್ರಲ್‌ ಪ್ರದೇಶದಲ್ಲಿ ಟ್ರಾಫಿಕ್‌ ನಿರ್ಬಂಧಗಳನ್ನ ಹೇರಲಾಗುತ್ತೆ ಅಂತ ಬೆಂಗಳೂರು ಪೊಲೀಸ್‌ ಅನೌನ್ಸ್‌ ಮಾಡಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ಕೆಲ ಪರ್ಯಾಯ ಮಾರ್ಗಗಳನ್ನ ಕೂಡ ಸೂಚಿಸಲಾಗಿದೆ. ಅಷ್ಟೇ ಅಲ್ದೇ ಈವೆಂಟ್‌ ವೇಳೆ ಪ್ಯಾಲೇಸ್‌ ರೋಡ್‌, ಜಯಮಹಲ್‌ ರೋಡ್‌, ರಾಮನಾಮಹರ್ಷಿ ರೋಡ್‌, ಮೌಂಟ್‌ ಕಾರ್ಮೆಲ್‌, ಎಮ್‌ವಿ ಜಯರಾಮ್‌ ರೋಡ್‌, ಸಿವಿ ರಾಮನ್‌ ರೋಡ್‌, ನಂದಿದುರ್ಗಾ ರೋಡ್‌, ಕಾಲೇಜ್‌ ರೋಡ್‌, ವಸಂತನಗರ್‌ ರೋಡ್‌, ಬಳ್ಳಾರಿ ರೋಡ್‌ ಮತ್ತು ತರಳಬಾಳು ರೋಡ್‌ ಬಳಿ ಪಾರ್ಕಿಂಗ್‌ ನಿಷೇಧಿಸಲಾಗಿದೆ.

-masthmagaa.com

Contact Us for Advertisement

Leave a Reply