ಬೆಂಗಳೂರು ಕೆಫೆ ಸ್ಫೋಟದ ಇಬ್ಬರು ಆರೋಪಿಗಳ ಬಂಧನ!

masthmagaa.com:

ಬೆಂಗಳೂರು ರಾಮೇಶ್ವರಂ ಕೆಫೆಯ ಸ್ಫೋಟ ಪ್ರಕರಣ ಕೊನೆಗೂ ಮುಕ್ತಾಯ ಹಂತಕ್ಕೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಇದೀಗ ಕೋಲ್ಕತ್ತಾದಲ್ಲಿ NIA ಬಲೆಗೆ ಬಿದ್ದಿದ್ದಾರೆ. ಒಬ್ಬ ಆಕ್ಷನ್‌ಗೆ ಇಳಿದು ಕೆಫೆಯೊಳಗೆ ಸ್ಫೋಟವಿಟ್ಟ ಆರೋಪಿ ಮುಸ್ಸಾವೀರ್‌ ಹುಸೈನ್‌ ಶಾಜೀಬ್‌. ಮತ್ತೊಬ್ಬ ಇಡೀ ಕೆಫೆ ಸ್ಫೋಟದ ರೂವಾರಿ…ಮಾಸ್ಟರ್‌ಮೈಂಡ್‌ ಅಬ್ದುಲ್‌ ಮತೀನ್‌. ಇವ್ರಿಬ್ರೂ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳು. ಇದೀಗ ಸ್ಪೋಟ ನಡೆದ ಬಳಿಕ ಬೇರೆ ಐಡೆಂಟಿಟಿಯಲ್ಲಿ ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ರು. ಇವ್ರನ್ನ NIA ತಂಡ, ಕೇಂದ್ರ ಗುಪ್ತಚರ ಸಂಸ್ಥೆ ಹಾಗೂ ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ ಮತ್ತು ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಪತ್ತೆ ಮಾಡಿ ಅರೆಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply