masthmagaa.com:
ದೇಶದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ಕಾಲಿಡ್ತಾ ಅನ್ನೋ ಭೀತಿ ಶುರುವಾಗಿದೆ. ಇದಕ್ಕೆ ಕಾರಣ ದೆಹಲಿಯ ವಿವಿಧ ಕಡೆ ಒಟ್ಟು 200ಕ್ಕೂ ಹೆಚ್ಚು ಕಾಗೆಗಳು ಸತ್ತುಬಿದ್ದಿರೋದು ಪತ್ತೆಯಾಗಿದೆ. ಕಾಗೆಗಳು ಹಕ್ಕಿಜ್ವರದಿಂದಲೇ ಸತ್ತಿದ್ದಾವಾ ಅನ್ನೋದು ಇನ್ನೂ ದೃಢಪಟ್ಟಿಲ್ಲ. ಅವುಗಳ ಸ್ಯಾಂಪಲ್ಗಳನ್ನ ಪರೀಕ್ಷೆಗೆ ಕಳಿಸಲಾಗಿದೆ. ಅದರ ವರದಿ ಬಂದ ಬಳಿಕ ಗೊತ್ತಾಗಲಿದೆ. ಅಂದ್ಹಾಗೆ ದೇಶದ 6 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ ಅಂತ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಹೇಳಿತ್ತು. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್. ಹರಿಯಾಣದಲ್ಲಂತೂ ಇದುವರೆಗೆ 1.60 ಲಕ್ಷಕ್ಕೂ ಹೆಚ್ಚು ಹಕ್ಕಿಗಳನ್ನ ಕೊಲ್ಲಲಾಗಿದೆ ಅಂತ ಅಲ್ಲಿನ ಸರ್ಕಾರವೇ ಹೇಳಿದೆ. ಇದೀಗ ಹರಿಯಾಣದ ಪಕ್ಕದಲ್ಲೇ ಇರುವ ದೆಹಲಿಯಲ್ಲಿ ಕಾಗೆಗಳು ಸತ್ತಿರೋದು ಅನುಮಾನಕ್ಕೆ ಕಾರಣವಾಗಿದೆ. ದೆಹಲಿಯ
-masthmagaa.com
Contact Us for Advertisement