ಹಿಂದಿ ಹಾರ್ಟ್‌ಲ್ಯಾಂಡ್‌ನ ನೂತನ ಸಿಎಂಗಳ ಆಯ್ಕೆಗೆ ಬಿಜೆಪಿ ವೀಕಕ್ಷರ ನೇಮಕ!

masthmagaa.com:

ಪಂಚರಾಜ್ಯಗಳ ಫೈಟ್‌ನಲ್ಲಿ ಗೆದ್ದು ಬೀಗಿದ್ದ ಕಮಲ ಪಡೆ ಇದೀಗ ಮೂರು ಹಿಂದಿ ಹಾರ್ಟ್‌ ಲ್ಯಾಂಡ್ ರಾಜ್ಯಗಳ ಮುಖ್ಯಮಂತ್ರಿಗಳ ನೇಮಕಕ್ಕೆ ಕೇಂದ್ರ ಬಿಜೆಪಿ ವೀಕ್ಷಕರ ಟೀಮ್‌ಗಳನ್ನ ನಿಯೋಜಿಸಿದೆ. ರಾಜಸ್ತಾನದಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ವಿನೋದ್‌ ತಾವಡೆ, ಸರೋಜ್‌ ಪಾಂಡೆ ಟೀಮ್‌ ರಾಜಸ್ತಾನದ ಮುಂದಿನ ಸಾರಥಿ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದೆ. ಇತ್ತ ಮಧ್ಯ ಪ್ರದೇಶದಲ್ಲಿ ಹರ್ಯಾಣ ಸಿಎಂ ಮನೋಹರ್‌ ಲಾಲ್‌ ಕಟ್ಟರ್, ಕೆ.ಲಕ್ಷ್ಮಣ್‌ ಮತ್ತು ಆಶಾ ಲಾಕ್ರಾರನ್ನ ಒಳಗೊಂಡ ತಂಡ ಯಾರನ್ನ ಸಿಎಂ ಮಾಡ್ಬೇಕು ಅನ್ನೋ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದೆ. ಇನ್ನುಳಿದಂತೆ ಬುಡಕಟ್ಟು ಜನಾಂಗದ ರಾಜ್ಯ ಅಂತ ಕರೆಸಿಕೊಳ್ಳೊ ಛತ್ತೀಸ್‌ಗಢ್‌ನ ನೂತನ ಸಿಎಂ ಆಯ್ಕೆಗಾಗಿ ಕೇಂದ್ರ ಸಚಿವ ಅರ್ಜುನ್‌ ಮುಂಡಾ, ಸರ್ವಾನಂದ್‌ ಸೋನೆವಾಲ್‌, ದುಷ್ಯಂತ್‌ ಕುಮಾರ್‌ ಗೌತಮ್‌ ಕೇಂದ್ರ ಬಿಜೆಪಿ ಘಟಕಕ್ಕೆ ವರದಿ ಸಲ್ಲಿಸಲಿದ್ದಾರೆ.

-masthmagaa.com

Contact Us for Advertisement

Leave a Reply