ಕೇಜ್ರಿವಾಲ್‌ ಮನೆ ಮೇಲೆ ದಾಳಿ; ಆರೋಪಿಗಳಿಗೆ ಹಾರ ಹಾಕಿ ಸನ್ಮಾನ ಮಾಡಿದ ಬಿಜೆಪಿ!

masthmagaa.com:

ಇತ್ತೀಚಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮನೆ ಮೇಲೆ ದಾಳಿ ಮಾಡಿದ ಎಂಟು ಆರೋಪಿಗಳನ್ನ ಬಿಜೆಪಿ ಇವತ್ತು ಹಾರ ಹಾಕಿ ಸನ್ಮಾನ ಮಾಡಿದೆ. ಮಾರ್ಚ್‌ 30 ರಂದು ನಡೆದ ದಾಳಿ ಸಂಬಂಧ ಎಂಟು ಜನ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನ ದಿಲ್ಲಿ ಪೋಲಿಸ್‌ ಅರೆಸ್ಟ್‌ ಮಾಡಿದ್ರು. ಇವತ್ತು ದಿಲ್ಲಿ ಹೈಕೋರ್ಟ್‌ ಎಂಟು ಜನ್ರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ದಿಲ್ಲಿ ಬಿಜೆಪಿ ಅ‍ಧ್ಯಕ್ಷ ಆದೇಶ್‌ ಗುಪ್ತಾ ಅವ್ರಿಗೆ ಹಾರ ಹಾಕಿ ಪಕ್ಷದ ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಆಪ್‌ ಶಾಸಕಿ ಅತಿಷಿ, ಬಿಜೆಪಿ ಗೂಂಡಾಗಳು, ಪುಂಡು ಪೋಕರಿಗಳನ್ನ ಸನ್ಮಾನ ಮಾಡೋದ್ರ ಮೂಲಕ ತನ್ನ ನಿಜವಾದ ಮುಖವನ್ನ ಅನಾವರಣ ಮಾಡ್ತಾ ಇದೆ. ಜೊತೆಗೆ ತನ್ನ ಕಾರ್ಯಕರ್ತರಿಗೆ ಗೂಂಡಾಗಿರಿ ಮಾಡಿ ಅಂತ ಸಂದೇಶ ಕಳಿಸ್ತಾ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply