masthmagaa.com:
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿದ್ದು, ಈ ಬಗ್ಗೆ ಜೆಡಿಎಸ್ ಕನ್ಫರ್ಮ್ ಮಾಡಿದೆ. ಈ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳನ್ನ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ ʻಜಾತ್ಯಾತೀತತೆʼಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಅನ್ನೊ ಹೆಸರನ್ನು ʻಕಮಲ ದಳʼ ಅಂತ ಚೇಂಜ್ ಮಾಡ್ಕೊಂಡ್ರೆ ಒಳ್ಳೆಯದಯ ಅಂತ ಕಾಂಗ್ರೆಸ್ ಕಿಚಾಯಿಸಿದೆ. ಅಷ್ಟೆ ಅಲ್ದೆ ಜೆಡಿಎಸ್ ಪಕ್ಷವನ್ನ ಫ್ಯಾಮಿಲಿ ಪಾರ್ಟಿ ಅಂತ ಬಿಜೆಪಿ ಟೀಕೆ ಮಾಡ್ತಿತ್ತು. ಈಗ ಅದೇ ಫ್ಯಾಮಿಲಿಗೆ 4 ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ತಿರೋದು ನಾಚಿಕೆಗೇಡು ಅಲ್ವಾ ಅಂತ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
-masthmagaa.com
Contact Us for Advertisement