ವೇದಿಕೆಯಲ್ಲೇ ಬೊಮ್ಮಾಯಿ-ಯತ್ನಾಳ್‌ ವಾರ್: BJP ಅಂತರ್‌ಯುದ್ಧ ಸ್ಫೋಟ

masthmagaa.com:

ರಾಜ್ಯ ಬಿಜೆಪಿಯಲ್ಲಿ ಜಿಲ್ಲಾ ಕಾರ್ಯಕರ್ತರ ಸಭೆಗಳು ನಡೆಯುತ್ತಿದ್ದು, ಎಲ್ಲ ಕಡೆ ಸೋಲಿನ ಅವಲೋಕನ ಆಗ್ತಿದೆ. ಇಂದು ಬೆಳಗಾವಿ ಜಿಲ್ಲಾ ಕಾರ್ಯಕರ್ತರ ಸಭೆ ನಡೆದಿದ್ದು, ಈ ವೇಳೆ ವೇದಿಕೆ ಮೇಲೆಯೇ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಸಭೆ ಉದ್ದೇಶಿಸಿ ಮೊದಲ ಭಾಷಣ ಮಾಡಿದ ಯತ್ನಾಳ್‌, ಇತ್ತೀಚೆಗೆ ಬೊಮ್ಮಾಯಿ ಅವ್ರು, ಶಾಮನೂರು ಶಿವಶಂಕರಪ್ಪ ಹಾಗೂ ಡಿಕೆ ಶಿವಕುಮಾರ್‌ ಅವ್ರನ್ನ ಭೇಟಿ ಆಗಿರೋ ವಿಚಾರವನ್ನ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಅಲ್ದೇ ಕಳೆದ ಚುನಾವಣೆಯಲ್ಲಿ ಯಾರು ಏನು ಮಾಡಿದ್ರು ಅಂತ ಕಾರ್ಯಕರ್ತರಿಗೂ ಗೊತ್ತಿದೆ. ಕಾರ್ಯಕರ್ತರ ಬದಲು ನಾಯಕರು ಬದಲಾಗಬೇಕು. ಆಗ ನಾಯಕರಿಗೆ ಭವಿಷ್ಯವಿದೆ ಅಂತ ಖಡಕ್‌ ಆಗಿ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ, ಡಿಕೆ ನೇತೃತ್ವದ ಕಾಂಗ್ರೆಸ್​ ಸರ್ಕಾರ 5 ವರ್ಷ ಪೂರೈಸಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರ ಆಕ್ಸಿಡೆಂಟ್ ಆಗುತ್ತೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಮೆಟ್ಟಿನಿಂದ ಹೊಡೆದಾಡಿಕೊಳ್ಳುತ್ತಾರೆ ಅಂತ ವಿಜಯಪುರ ಬಿಜೆಪಿ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಬಳಿಕ ಮಾತಾಡಿದ ಬೊಮ್ಮಾಯಿ, ವೇದಿಕೆಯಲ್ಲೇ ಯತ್ನಾಳ್‌ ಅವ್ರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. 30 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಯಾರ ಜೊತೆಗೂ ರಾಜೀ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ಮನೆಗೆ ಬಂದವ್ರನ್ನ ಸ್ವಾಗತಿಸೋದು ಪರಂಪರೆ. ಯಾರನ್ನೂ ನಾನು ಮನೆಯೊಳಗಿನ ರೂಂಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply